ಕ್ರಿಸ್ತನ ಉಪದೇಶವಾದ ಶಾಂತಿ, ಪ್ರೀತಿ, ಮಾನವೀಯತೆ ಇಂದಿನ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರಗೌಡ ತಿಳಿಸಿದರು.
ತಾಲ್ಲೂಕಿನ ಹುಜಗೂರು ಗ್ರಾಮದಲ್ಲಿ ಮಂಗಳವಾರ ಇಮ್ಮಾನು ವೆಲ್ ಟ್ರಸ್ಟ್ ವತಿಯಿಂದ ಕ್ರಿಸ್ಮಸ್ ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಅವರು ಮಾತನಾಡಿದರು.
ಕ್ರಿಸ್ಮಸ್ ಹಬ್ಬ ಶಾಂತಿಯನ್ನು ಸಾರುತ್ತಿದೆ. ಶಾಂತಿಯ ಸಾಧನಗಳಾಗಲು, ಶಾಂತಿಯ ದೂತರಾಗಲು ನಮ್ಮನ್ನು ಆಹ್ವಾನಿಸುತ್ತಿದೆ. ಕ್ರಿಸ್ತ ಜಯಂತಿಯ ಪ್ರೀತಿಯ ಜ್ಯೋತಿ ನಮ್ಮ ತನು-ಮನಗಳಲ್ಲಿ, ಮನೆ-ಮಂದಿರಗಳಲ್ಲಿ ಪ್ರಜ್ವಲಿಸಲಿ. ಸ್ವಾರ್ಥ, ಹಗೆತನವನ್ನು ಬಿಟ್ಟು ತ್ಯಾಗ ತನ್ಮಯರಾಗಿ. ಸೇವಾಮನೋಭಾವದಿಂದ ಮುನ್ನೆಡೆಯಿರಿ ಎಂದರು.
ಕ್ರೈಸ್ತ ಮುಖಂಡ ಮುನಿನಾರಾಯಣ ಮಾತನಾಡಿ, ಯೇಸು ಸ್ವಾಮಿ ನಿನ್ನೆಯಂತೆ ಇಂದು, ಇಂದಿನಂತೆ ನಾಳೆ ಹಾಗೂ ಚಿರಕಾಲ ನಮ್ಮೊಡನೆ ಇರುವರು. ಅವರ ಹೆಸರು ‘ಇಮ್ಮಾನು ವೆಲ್’ ಎಂದರೆ ‘ದೇವರು ನಮ್ಮೊಡನೆ’ ಎಂದು ಅರ್ಥ. ಈ ಕ್ರಿಸ್ಮಸ್ ಲೋಕ ದಲ್ಲಿ ಶಾಂತಿ, ಸಮಾಧಾನ ನೆಲೆಸುವಂತೆ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಬಡ ಮಹಿಳೆಯರಿಗೆ ಟ್ರಸ್ಟ್ ವತಿಯಿಂದ ಸೀರೆಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ದೇವರಾಜ್, ದೇವರಾಜು, ಪಿಡಿಓ ರಾಮಕೃಷ್ಣ, ಕೆಂಪೇಗೌಡ, ರಾಮಚಂದ್ರ, ಕದಿರಪ್ಪ, ಅರುಣ್ಕುಮಾರ್, ವೆಂಕಟೇಶ್, ಶಾಮಣ್ಣ, ನಾರಾಯಣಸ್ವಾಮಿ, ಹರೀಶ್, ಗೋವಿಂದಪ್ಪ, ಎಚ್.ಎನ್.ಮುನಿನಾರಾಯಣ, ಶಿವಕುಮಾರ್, ಮಂಜುನಾಥ್, ಚೌಡಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -