ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಪಟಾಲಮ್ಮ ಮತ್ತು ಶ್ರೀ ವೀರಸೊಣ್ಣಮ್ಮ ದೇವಿಯವರ 20ನೇ ವರ್ಷದ ರಥೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಭಾನುವಾರ ರಾತ್ರಿ ಆಯೋಜಿಸಲಾಗಿತ್ತು.
ವರದನಾಯಕನಹಳ್ಳಿಯ ಶಾಲೆಯ ಆವರಣದಲ್ಲಿ ನಡೆದ ಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲಾದ್ಯಂತ ಸುಮಾರು 30 ತಂಡಗಳು ಭಾಗವಹಿಸಿದ್ದು, ಮಹಿಳೆಯರು, ಮಕ್ಕಳು, ಹಿರಿಯರು, ಕಿರಿಯರು ಬೇಧವಿಲ್ಲದೆ ಗ್ರಾಮಸ್ಥರೆಲ್ಲಾ ಪಂದ್ಯಾವಳಿಯನ್ನು ರಾತ್ರಿಯಿಡೀ ನೋಡಿ ಆನಂದಿಸಿದರು. ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು. ಗ್ರಾಮದಲ್ಲಿ ರಥೋತ್ಸವದ ಪ್ರಯುಕ್ತ ಸಾಸುಲ ಚಿನ್ನಮ್ಮ ನಾಟಕ ಪ್ರದರ್ಶನವಿದ್ದರೂ, ಜನರೆಲ್ಲಾ ಕ್ರೀಡೆಯತ್ತಲೇ ಆಕರ್ಷಿತರಾಗಿದ್ದುದು ವಿಶೇಷವಾಗಿತ್ತು.
ಪ್ರಥಮ ಬಹುಮಾನ 12 ಸಾವಿರ ರೂಗಳನ್ನು ತಾಲ್ಲೂಕು ಪಂಚಾಯತಿ ಸದಸ್ಯ ಲಕ್ಷ್ಮೀನಾರಾಯಣ ಪ್ರಾಯೋಜಿಸಿದ್ದು, ದೊಡ್ಡತೇಕಹಳ್ಳಿಯ ಸಿ.ವಿ.ವಿ ತಂಡದವರ ಪಾಲಾಯಿತು. ದ್ವಿತೀಯ ಬಹುಮಾನ 8 ಸಾವಿರ ರೂಗಳನ್ನು ವರದನಾಯಕನಹಳ್ಳಿಯ ವರದರಾಜ್ ಪ್ರಾಯೋಜಿಸಿದ್ದು, ವರದನಾಯಕನಹಳ್ಳಿಯ ಬಿ ತಂಡದವರ ಪಾಲಾಯಿತು. ತೃತೀಯ ಬಹುಮಾನ 4 ಸಾವಿರ ರೂಗಳನ್ನು ವರದನಾಯಕನಹಳ್ಳಿ ವಿ.ಎಚ್.ಬೈಯಣ್ಣ ಪ್ರಾಯೋಜಿಸಿದ್ದು, ದೊಡ್ಡತೇಕಹಳ್ಳಿಯ ತಂಡದವರ ಪಾಲಾಯಿತು. ನಾಲ್ಕನೇ ಬಹುಮಾನ 2 ಸಾವಿರ ರೂಗಳನ್ನು ವರದನಾಯಕನಹಳ್ಳಿ ಎನ್.ವೆಂಕಟಸ್ವಾಮಿ ಪ್ರಾಯೋಜಿಸಿದ್ದು, ವರದನಾಯಕನಹಳ್ಳಿಯ ಯಂಗ್ ಬುಲ್ಸ್ ತಂಡದವರ ಪಾಲಾಯಿತು.
- Advertisement -
- Advertisement -
- Advertisement -