ವಿದ್ಯಾರ್ಥಿ ಹಂತದ ಪ್ರಮುಖ ಘಟ್ಟದಲ್ಲಿ ತೆಗೆದು ಕೊಂಡ ನಿರ್ಣಯವು ಜೀವನವನ್ನು ನಿರ್ದೇಶಿಸುತ್ತದೆ. ಹಣ ಸಂಪಾದನೆಯ ಜೊತೆಗೆ ನಮ್ಮ ಜೀವನ ರೂಪಿಸಿದ ಸಮಾಜಕ್ಕೆ ಋಣಿಯಾಗುವುದನ್ನು ಮರೆಯಬಾರದು ಎಂದು ನಿವೃತ್ತ ಪಾಂಶುಪಾಲ ಎಂ.ಎನ್. ನಾರಾಯಣಸ್ವಾಮಿ ತಿಳಿಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಕಲಾ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಸರ ಕಾಳಜಿ, ಹಿರಿಯರ ಆದರ್ಶ, ರಾಷ್ಟ್ರಪ್ರೇಮ, ಪರಂಪರೆಯ ಅರಿವು, ಸಾಮಾಜಿಕ ಬದ್ಧತೆ, ಶಿಸ್ತು, ಸಾಮಾಜಿಕ ಕಳಕಳಿ, ಸಾರ್ವಜನಿಕ ಆಸ್ತಿಯ ಬಗ್ಗೆ ಗೌರವ ಮುಂತಾದ ಅಂಶಗಳನ್ನು ಮೈಗೂಡಿಸಿಕೊಂಡಲ್ಲಿ ಯಾವುದೇ ಉದ್ಯೋಗ, ವ್ಯಾಪಾರ, ವಹಿವಾಟನ್ನು ನಡೆಸಿದರೂ ಮಾದರಿಯಾಗುತ್ತೀರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಅನುಭವಗಳು, ಗುರುಗಳೊಂದಿಗೆ ಹಾಗೂ ಸಹಪಾಠಿಗಳೊಂದಿಗಿನ ಅನುಭವವನ್ನು ತಿಳಿಸಿದರು. ತಮ್ಮ ಮುಂದಿನ ಜೀವನದ ಗುರಿಗಳ ಬಗ್ಗೆ ಅನಿಸಿಕೆಯನ್ನು ಹೇಳಿದರು.
ಪ್ರಾಂಶುಪಾಲ ಚಂದ್ರಾನಾಯಕ್, ಉಪನ್ಯಾಸಕರಾದ ರಮೇಶ್ ರೆಡ್ಡಿ, ನಾಯ್ಡು, ರಾಮಚಂದ್ರಪ್ಪ, ಛಾಯಣ್ಣ, ವೆಂಕಟರೋಣಪ್ಪ, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -