ತಾಲ್ಲೂಕಿನ ಅಮ್ಮಗಾರಹಳ್ಳಿ ಬಳಿ ಮೂರು ಕಾಡು ಮೊಲಗಳನ್ನು ಬೇಟೆ ಆಡಿದ್ದ ಮೂವರು ವ್ಯಕ್ತಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೈಯಪ್ಪನಹಳ್ಳಿಯ ವೆಂಕಟೇಶ(37), ನಲ್ಲರಾಳ್ಳಹಳ್ಳಿಯ ವಿಜಯಕುಮಾರ್(26) ಮತ್ತು ವೆಂಕಟೇಶ(27) ಎಂಬುವವರನ್ನು ಬಂಧಿಸಿ, ಸತ್ತ ಮೊಲಗಳನ್ನು ಹಾಗೂ ಕೊಲ್ಲಲು ಬಳಸಿದ ಆಯುಧವನ್ನು ವಶಕ್ಕೆ ಪಡೆದು, ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ತಿಳಿಸಿದ್ದಾರೆ.