19.2 C
Sidlaghatta
Sunday, October 12, 2025

ಕೆನರಾ ಬ್ಯಾಂಕಿನ ವ್ಯವಸ್ಥಾಪಕರಿಗೆ ರೈತಕೂಟದಿಂದ ಗೌರವ

- Advertisement -
- Advertisement -

ರೈತಕೂಟಗಳನ್ನು ಸ್ಥಾಪಿಸುವಲ್ಲಿ ಹಾಗೂ ಆ ಮೂಲಕ ರೈತರ ಬೆಳವಣಿಗೆಗೆ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಗಿರೀಶ್ ಸಹಕಾರಿಯಾಗಿದ್ದರು ಎಂದು ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ತಿಳಿಸಿದರು.
ನಗರದ ಕೆನರಾ ಬ್ಯಾಂಕಿನ ಶಾಖೆಯಲ್ಲಿ ಶನಿವಾರ ಮುಂಬಡ್ತಿ ಪಡೆದು ಪ್ರಧಾನ ಕಛೇರಿಗೆ ವರ್ಗಾವಣೆಗೊಂಡ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಗಿರೀಶ್ ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಸಿರಿ ಸಮೃದ್ಧಿ ರೈತ ಕೂಟದ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಮಹಿಳಾ ರೈತಕೂಟವನ್ನೂ ಸೇರಿದಂತೆ ತಾಲ್ಲೂಕಿನಲ್ಲಿ ವಿವಿಧ ರೈತಕೂಟಗಳನ್ನು ಸ್ಥಾಪಿಸಿ ರೈತರನ್ನು ಅಧ್ಯಯನ ಪ್ರವಾಸದ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಂಡು ಆರ್ಥಿಕವಾಗಿ ಪ್ರಗತಿಯಾಗುವಂತೆ ಮಾಡಲು ಬ್ಯಾಂಕ್ ವ್ಯವಸ್ಥಾಪಕರು ನೆರವಾಗಿದ್ದಾರೆ. ಬ್ಯಾಂಕಿನ ವಹಿವಾಟು ದ್ವಿಗುಣಗೊಳಿಸಿ ಸಾಕಷ್ಟು ಜನರಿಗೆ ಅನುಕೂಲ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಡಾ.ಸತ್ಯನಾರಾಯಣರಾವ್, ಸಿರಿ ಸಮೃದ್ಧಿ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಕಾರ್ಯದರ್ಶಿ ಬಿ.ಎಂ.ಪ್ರಕಾಶ್, ರಾಮಮೂರ್ತಿ, ಎಸ್.ಎಂ.ಮಾರೇಗೌಡ, ಬೂದಾಳ ರಾಮಾಂಜಿನಪ್ಪ, ಬ್ಯಾಂಕಿನ ಸಿಬ್ಬಂಧಿಗಳಾದ ಮುನಿಲಕ್ಷ್ಮಮ್ಮ, ಅಭಿಷೇಕ್, ಸಂಧ್ಯಾ, ವಿನುತಾ ಪೂಜಾರಿ, ನಮಿತಾ, ನೇತ್ರಾ, ಶ್ರೀನಿವಾಸ್, ಮುನಿರಾಜು, ವೀರಭದ್ರಪ್ಪ, ಬಂಗಾರು ಶ್ರೀನಿವಾಸ್, ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!