ಗ್ರಾಮದೇವತೆ ಗಂಗಾದೇವಿ ಜಾತ್ರಾ ಮಹೋತ್ಸವ

- Advertisement -
- Advertisement -

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಪುರಾಣ ಪ್ರಸಿದ್ಧ ಗ್ರಾಮದೇವತೆ ಗಂಗಾದೇವಿ ಜಾತ್ರಾ ಮಹೋತ್ಸವವು ಮಂಗಳವಾರ ರಾತ್ರಿ ವಿವಿಧ ಪೂಜೆ ಹಾಗೂ ಆಚರಣೆಗಳಿಂದ ಪ್ರಾರಂಭವಾಯಿತು.
ಶ್ರೀ ಗಂಗಾದೇವಿ ಮೇಲೂರಿನಲ್ಲಿ ಬಂದು ನೆಲೆಸಿದ ಮೇಲೆ ಗ್ರಾಮ ಶಾಂತಿಯಿಂದ ಇದ್ದು, ರೋಗ ರುಜಿನಗಳು, ದುಷ್ಟ ಶಕ್ತಿಗಳಿಂದ ಗ್ರಾಮ ರಕ್ಷಕಿಯಾಗಿದ್ದಾಳೆ. ತಾಯಿ ಗಂಗಾದೇವಿ ಅಮ್ಮನವರು ಮೇಲೂರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ರಕ್ಷಣೆ ಹಾಗೂ ಆರಾಧನೆಯ ದೈವವಾಗಿದ್ದಾಳೆ.
ಪ್ರತಿ ವರ್ಷ ನಡೆಯುವ ಶ್ರೀ ಗಂಗಾದೇವಿ ಜಾತ್ರಾ ಮಹೋತ್ಸವದಲ್ಲಿ ಸೊಪ್ಪಿನ ರಥ, ಬಾಯಿ ಬೀಗಗಳು, ದೀಪೋತ್ಸವ ಹಾಗೂ ರಥೋತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಗ್ರಾಮದ ಹೆಣ್ಣು ಮಕ್ಕಳು ತವರಿಗೆ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆ.

ವಾಲ್ಮೀಕಿ ಮತಸ್ಥರಾದ ನಾಯಕ ಜನಾಂಗದವರಿಂದ ಸೊಪ್ಪಿನ ರಥವನ್ನು ದೇವಿಗೆ ಅರ್ಪಿಸಲಾಯಿತು.
ವಾಲ್ಮೀಕಿ ಮತಸ್ಥರಾದ ನಾಯಕ ಜನಾಂಗದವರಿಂದ ಸೊಪ್ಪಿನ ರಥವನ್ನು ದೇವಿಗೆ ಅರ್ಪಿಸಲಾಯಿತು.
ಮಂಗಳವಾರ ವಾಲ್ಮೀಕಿ ಮತಸ್ಥರಾದ ನಾಯಕ ಜನಾಂಗದವರಿಂದ ಸೊಪ್ಪಿನ ರಥ ಹಾಗೂ ಪೂಜೆಯನ್ನು ಆಯೋಜಿಸಲಾಗಿತ್ತು. ನಾಯಕ ಜನಾಂಗದವರು ಬೆಳಿಗ್ಗೆಯಿಂದ ಉಪವಾಸವಿದ್ದು, ಮಡಿಯಿಂದ ಮರ ಕಡಿದು ಹಸಿ ಮರದಿಂದ ರಥ ತಯಾರಿಸಿ ಹೂ ಮತ್ತು ದೀಪಾಲಂಕಾರಗಳೊಂದಿಗೆ ತಾಯಿಯ ಕೀರ್ತನೆ ಮತ್ತು ಹಾಡುಗಳನ್ನು ಹಾಡುತ್ತಾ ಹುಳಿಸೊಪ್ಪಿನ ಸಾರು ಮತ್ತು ಮುದ್ದೆಯನ್ನು ಉತ್ಸವದಲ್ಲಿ ತಂದು ಪೂಜೆ ಸಲ್ಲಿಸಿದರು. ಹರಕೆಯನ್ನು ಹೊತ್ತವರಿಗೆ ಬಾಯಿ ಬೀಗ ಹಾಕಿಸಲಾಯಿತು. ನಂತರ ದೇವಾಲಯದಲ್ಲಿ ತಾಯಿ ಗಂಗಾದೇವಿಗೆ ಬಾಯಿ ಬೀಗಗಳನ್ನು ಅರ್ಪಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿದರು.
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!