19.1 C
Sidlaghatta
Tuesday, December 2, 2025

ತೊಗರಿ ಬೆಳೆ ಕ್ಷೇತ್ರೋತ್ಸವ

- Advertisement -
- Advertisement -

ತಾಲ್ಲೂಕಿನ ಮುತ್ತೂರು ಗ್ರಾಮದ ಎಂ.ಎಸ್.ಮಹೇಶ್ ಅವರ ಹೊಲದಲ್ಲಿ ಈಚೆಗೆ ಮಳೆಯಾಶ್ರಿತ ತೊಗರಿ ಬೆಳೆ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಆತ್ಮಯೋಜನೆಯಲ್ಲಿ ನಡೆದ ಕ್ಷೇತ್ರೋತ್ಸವದಲ್ಲಿ ಸಹಾಯಕ ಕೃಷಿ ನಿರ್ದೇಶಕ ಬಿ.ಸಿ.ದೇವೇಗೌಡ ಮಾತನಾಡಿ, ತೊಗರಿ ಬೆಳೆಯ ಮುಖ್ಯ ಬೇಸಾಯ ಕ್ರಮಗಳಾದ ಭೂಮಿ ಸಿದ್ಧತೆ, ತಳಿಗಳು ಮತ್ತು ಕಾಲಾವಧಿ, ಬಿತ್ತನೆಕಾಲ, ಬಿತ್ತನೆಬೀಜ ಹಾಗೂ ಇತರೆ ಪರಿಕರಗಳ ಅವಶ್ಯಕತೆ ಕುರಿತಂತೆ, ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಸಿಗುವ ಸೌಲಭ್ಯಗಳು ಕುರಿತಂತೆ ಮಾಹಿತಿ ತಿಳಿಸಿದರು.
ಕೃಷಿ ಅಧಿಕಾರಿ ಗೋಪಾಲರಾವ್, ಬೀಜೋಪಚಾರ, ಸಮಗ್ರ ಪೋಷಕಾಂಶಗಳು ಮತ್ತು ಪೀಡೆನಾಶಕಗಳ ನಿರ್ವಹಣೆಯಿಂದ ಅಧಿಕ ಇಳುವರಿ ಪಡೆಯುವ ಬಗ್ಗೆ ತಿಳಿಸಿಕೊಟ್ಟರು.
ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಎನ್.ಅಶ್ವತ್ಥನಾರಾಯಣ, ಆತ್ಮಯೋಜನೆಯಿಂದ ರೈತರಿಗೆ ಸಿಗುವ ವಿಸ್ತರಣಾ ಕಾರ್ಯಕ್ರಮಗಳು ಮತ್ತು ಪರಿಕರಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ವೆಂಕಟರಾಜೇಗೌಡ, ಕೃಷಿಕ ಸಮಾಜದ ಸದಸ್ಯ ಎಂ.ಟಿ.ಕೆಂಪೇಗೌಡ, ರೈತರಾದ ಎಂ.ಬಿ.ವೇಣುಗೋಪಾಲ್, ಮುರಳಿ, ಗಂಗಾಧರ್, ಮಹೇಶ್, ಆತ್ಮ ಸಿಬ್ಬಂದಿಗಳಾದ ಶಿಲ್ಪ, ಕಾವ್ಯ, ಸುಶ್ಮಿತ, ಅನುವುಗಾರರಾದ ಗಜೇಂದ್ರ, ರಾಮಾಂಜಿ, ಚನ್ನರಾಯಪ್ಪ, ಲೋಕೇಶ್, ರಾಮಾಂಜಿನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!