23.1 C
Sidlaghatta
Sunday, December 28, 2025

ದಿ ಕ್ರೆಸೆಂಟ್‌ ಶಾಲೆಯ ತೂಬಾ ನುದ್ರತ್‌, ಜ್ಞಾನಜ್ಯೋತಿ ಶಾಲೆಯ ಆರ್‌.ಚಂದುಶ್ರೀ ತಾಲ್ಲೂಕಿಗೆ ಪ್ರಥಮ

- Advertisement -
- Advertisement -

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಂದಿದ್ದು ತಾಲ್ಲೂಕಿಗೆ ಹೆಣ್ಣು ಮಕ್ಕಳು ಮೊದಲಿಗರಾಗಿದ್ದಾರೆ. ವಿಶೇಷವೆಂದರೆ ತಾಲ್ಲೂಕಿಗೆ ಮೊದಲಿಗರಾದ ಹೆಣ್ಣುಮಕ್ಕಳಲ್ಲಿ ಮಸೀದಿಯ ಮೌಲ್ವಿಯ ಮಗಳೊಬ್ಬಳಾದರೆ ಮತ್ತೊಬ್ಬಳು ರೈತರ ಮಗಳು.
ದಿ ಕ್ರೆಸೆಂಟ್‌ ಶಾಲೆಯ ತೂಬಾ ನುದ್ರತ್‌ 612(ಶೇ 97.92) ಮತ್ತು ಜಂಗಮಕೋಟೆಯ ಜ್ಞಾನಜ್ಯೋತಿ ಶಾಲೆಯ ಆರ್‌.ಚಂದುಶ್ರೀ 612(ಶೇ 97.92) ತಾಲ್ಲೂಕಿಗೆ ಹೆಚ್ಚು ಅಂಕಗಳಿಸಿದ್ದರೆ, ಬಿಜಿಎಸ್‌ ಶಾಲೆಯ ಪುಷ್ಪ 611(ಶೇ 97.76) ಮತ್ತು ಸಾದತ್‌ ಹುಸೇನ್‌(ಶೇ 97.76) ದ್ವಿತೀಯ ಸ್ಥಾನ ಪಡೆದಿದ್ದಾರೆ.
ದಿ ಕ್ರೆಸೆಂಟ್‌ ಶಾಲೆಯ ತೂಬಾ ನುದ್ರತ್‌ ಮಸೀದಿಯ ಮೌಲ್ವಿ ಅಫ್ಜಲ್‌ ಇಮಾಮ್‌ರ ಮಗಳು. ಇವರ ಮೂಲ ಪಶ್ಚಿಮ ಬಂಗಾಲ. ಮನೆ ಭಾಷೆ ಉರ್ದು. ವಿದ್ಯಾವಂತರ ಹಿನ್ನೆಯಿಲ್ಲದೆಯೂ ಸಾಧನೆ ಮಾಡಿ ಮಾದರಿಯಾಗಿದ್ದಾಳೆ. ಜಂಗಮಕೋಟೆಯ ಜ್ಞಾನಜ್ಯೋತಿ ಶಾಲೆಯ ಆರ್‌.ಚಂದುಶ್ರೀ ಅತ್ತಿಗಾನಹಳ್ಳಿಯ ಕೃಷಿಕ ರಾಮಾಂಜಿನಪ್ಪನ ಮಗಳು. ಬಿಜಿಎಸ್‌ ಶಾಲೆಯ ಪುಷ್ಪ ಸಹ ಪ್ರಾಧ್ಯಾಪಕ ನಾರಾಯಣಸ್ವಾಮಿಯ ಮಗಳು ಮತ್ತು ಸಾದತ್‌ ಹುಸೇನ್‌ ರೇಷ್ಮೆ ವ್ಯಾಪಾರಿ ಮೌಲಾ ಮಗ. ವಾಸವಿ ಶಾಲೆಯ ಎಸ್‌.ವಿ.ಮೇಘನಾ 598(ಶೇ 95.68) ತಂದೆ ವಿಜಯಕುಮಾರ್‌ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಚೇರಿಯಲ್ಲಿ ಜವಾನ ಆಗಿದ್ದಾರೆ.
ಬಡತನವಿದ್ದರೂ, ವಿದ್ಯೆಯ ಹಿನ್ನೆಲೆಯಿಲ್ಲದಿದ್ದರೂ, ಸಾಧನೆಗೆ ಪರಿಶ್ರಮಕ್ಕೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ತೋರಿಸಿಇತರರಿಗೆ ಮಾದರಿಯಾಗುವಂತೆ ಅಂಕಗಳನ್ನು ಗಳಿಸಿದ್ದಾರೆ ತಾಲ್ಲೂಕಿನ ವಿದ್ಯಾರ್ಥಿಗಳು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!