ದೇಶದಪೇಟೆಯ ಶೆಟ್ಟಪ್ಪನವರ ಎಸ್.ರವಿ ಅವರ ಮನೆಯಲ್ಲಿ ಪೈರುಹಬ್ಬ

- Advertisement -
- Advertisement -

ಯುಗಾದಿಯಾದ ಒಂಬತ್ತನೇ ದಿನ ಆಚರಿಸುವ ರೈತರ ಹಬ್ಬವಾದ ಪೈರುಹಬ್ಬವನ್ನು ಸೋಮವಾರ ಪಟ್ಟಣದ ದೇಶದಪೇಟೆಯಲ್ಲಿರುವ ಶೆಟ್ಟಪ್ಪನವರ ಎಸ್.ರವಿ ಅವರ ಮನೆಯಲ್ಲಿ ಆಚರಿಸಲಾಯಿತು.
ಯುಗಾದಿಯ ದಿನ ದೇವಾಲಯದಲ್ಲಿ ಬೇವು, ಬೆಲ್ಲ ಹಂಚಿ ಬಂದು ಮನೆಯಲ್ಲಿ ಅವರೆ, ಜೋಳ, ರಾಗಿ, ಹುರುಳಿ, ಹಲಸಂದಿ ಇತ್ಯಾದಿ ಧಾನ್ಯಗಳನ್ನು ಮಣ್ಣು ಮತ್ತು ಗೊಬ್ಬರದಲ್ಲಿ ಬೆರೆಸಿ ಇಡುತ್ತಾರೆ. ಜೊತೆಯಲ್ಲಿ ನೇಗಿಲನ್ನು ಇಟ್ಟು ಪೂಜಿಸಲಾಗುತ್ತದೆ. ರೈತರಿಗೆ ನೇಗಿಲು ಪೂಜನೀಯವಾದುದು. ಒಂಬತ್ತು ದಿನಗಳು ಪೂಜಿಸಿದ ಪೈರನ್ನು ಒಂಬತ್ತನೇ ದಿವಸ ಶ್ರೀರಾಮನವಮಿಯಂದು ತಮ್ಮ ಜಮೀನಿನಲ್ಲಿ ನೀರು ಹರಿಯುವೆಡೆ ಬಿಡುತ್ತಾರೆ. ನಂತರ ಈ ನೇಗಿಲಿನಿಂದ ಉಳುತ್ತಾರೆ.
pairu habba‘ಮನೆಯಲ್ಲಿ ಪೈರು ಎಷ್ಟು ಚೆನ್ನಾಗಿ ಬೆಳೆದಿದ್ದರೆ ತಮ್ಮ ಜಮೀನಿನಲ್ಲಿ ಫಸಲು ಅಷ್ಟು ಚೆನ್ನಾಗಿ ಬರುವುದೆಂಬ ನಂಬಿಕೆ ರೈತರದು. ಈಗ ಟ್ರಾಕ್ಟರ್‌ಮತ್ತು ಟಿಲ್ಲರ್‌ಗಳ ಕಾಲ. ಹಾಗಾಗಿ ಈ ಹಬ್ಬವನ್ನು ಆಚರಿಸುವವರೇ ಕಡಿಮೆಯಾಗಿದ್ದಾರೆ. ಮೊದಲು ದೊಡ್ಡ ನೇಗಿಲನ್ನೇ ಪೂಜೆಗೆ ಇಡುತ್ತಿದ್ದವರು ನಂತರ ಸಾಂಕೇತಿಕವಾಗಿ ಜಾಲಿಮರದ ತುಂಡನ್ನು ಇಡಲು ಪ್ರಾಂಭಿಸಿದ್ದಾರೆ. ನಾವು ಮಾತ್ರ ಉತ್ತಮ ಜಾಲಿ ಮರದಲ್ಲಿ ಪ್ರತಿ ವರ್ಷ ಹೊಸ ನೇಗಿಲನ್ನು ಮಾಡಿಸಿ ಪೂಜಿಸಿ ನಂತರ ಉಳುಮೆ ಪ್ರಾರಂಭಿಸುತ್ತೇವೆ. ಆದರೂ ಈಗಲೂ ಹಳ್ಳಿಗಳಲ್ಲಿ ನೇಗಿಲನ್ನೇ ಇಟ್ಟು ಪೂಜಿಸುವರು ಕೂಡ ಇದ್ದಾರೆ’ ಎನ್ನುತ್ತಾರೆ ಶೆಟ್ಟಪ್ಪನವರ ಎಸ್.ರವಿ.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!