23.1 C
Sidlaghatta
Friday, December 26, 2025

ನಗರದ ರಸ್ತೆ, ಮೋರಿಗಳ ಹೊಂಡಗಳನ್ನು ಮುಚ್ಚಲು ಪ್ರತಿಭಟನೆ

- Advertisement -
- Advertisement -

ನಗರದ ರಸ್ತೆಗಳಲ್ಲಿ ಬಿದ್ದ ಹೊಂಡಗಳನ್ನು ಮುಚ್ಚುವಂತೆ ಆಗ್ರಹಿಸಿ ಆಪ್ ಪಾರ್ಟಿ ಕಾರ್ಯಕರ್ತರು ಹೊಂಡದ ಬಳಿ ಬಾಯಿ ಬಡಿದುಕೊಳ್ಳುವ ವಿನೂತನವಾಗಿ ಪ್ರತಿಭಟನೆ ನಡೆಸಿ ನಗರಸಭೆಯ ಗಮನ ಸೆಳೆದರು.
ನಗರದ ಸಂತೆ ಮೈದಾನದ ಬಳಿ ಇರುವ ಮುನೇಶ್ವರಸ್ವಾಮಿ ದೇವಾಲಯದ ಬಳಿ ರಸ್ತೆಯ ಮೋರಿ ಮುರಿದು ಬಿದ್ದಿದೆ. ಅಲ್ಲಿ ಯಾರೋ ಸಾರ್ವಜನಿಕರು ಗಿಡದ ರೆಂಬೆಯನ್ನು ನೆಟ್ಟು ಮೋರಿ ಮುರಿದು ಬಿದ್ದಿದ್ದು ಎಚ್ಚರಿಕೆಯಿಂದ ಸಾಗಿ ಎಂದು ಸೂಚನೆ ನೀಡಿದ್ದಾರೆ.
ಈ ಹೊಂಡ ಬಳಿ ಸೋಮವಾರ ಜಮಾಯಿಸಿದ ಆಪ್ನ ಕಾರ್ಯಕರ್ತರು ಬಾಯಿ ಬಡಿದುಕೊಂಡು ನಗರಸಭೆಯ ಆಡಳಿತ ವೈಖರಿಯನ್ನು ಖಂಡಿಸಿದರು.
ನಗರದ ಅನೇಕ ಕಡೆ ರಸ್ತೆಗಳಲ್ಲಿ ಮೊಣಕಾಲುದ್ದದ ಹೊಂಡಗಳು ನಿರ್ಮಾಣ ಆಗಿವೆ, ಹಾಗೆಯೆ ಸಾಕಷ್ಟು ಮೋರಿಗಳ ಬಳಿಯೂ ಮೋರಿ ಕುಸಿದು ಬದ್ದಿದ್ದು ಸಂಚರಿಸಲು ಆಗದಂತಾಗಿದೆ. ಕಳಪೆ ಕಾಮಗಾರಿಯಿಂದ ಈ ರೀತಿಯಲ್ಲಿ ಹೊಂಡಗಳ ನಿರ್ಮಾಣ, ಮೋರಿ ಕುಸಿದಿರುವುದು ಆಗಿದೆ.
ಆದ್ದರಿಂದ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ದ ಕ್ರಮ ತೆಗೆದುಕೊಂಡು ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಕೂಡಲೆ ನಗರದಲ್ಲಿ ಬಿದ್ದಿರುವ ಹೊಂಡಗಳನ್ನು ಕೂಡಲೆ ಮುಚ್ಚಿ ಸರಿಪಡಿಸಬೇಕೆಂದು ಆಗ್ರಹಿಸಿದರು. ಅದುವರೆಗೂ ನಮ್ಮ ಪಕ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಆಪ್ನ ತಾಲ್ಲೂಕು ಸಂಚಾಲಕ ಬಿ.ಆರ್.ರಾಮಚಂದ್ರ, ನಗರ ಘಟಕದ ಅಧ್ಯಕ್ಷ ಅಪ್ಸರ್ಪಾಷ, ಜಮೀರ್, ಆಸೀಪ್, ಅನಿಲ್, ರವಿ, ಸುಬ್ಬು, ಪೈರೋಜ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!