ತಾಲ್ಲೂಕಿನ ನಾಗಮಂಗಲ ಗ್ರಾಮದ ವೆಂಕಟರಮಣಪ್ಪ ಮತ್ತು ನಾರಾಯಣಮ್ಮ ದಂಪತಿಯ ಮಗ ಶ್ರೀನಿವಾಸ ಅವರಿಗೆ ತಮಿಳುನಾಡಿನ ತಿರುಚನಾಪಳ್ಳಿಯ ಭಾರತೀದಾಸನ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ತಿರುಚನಾಪಳ್ಳಿಯ ಸೆಂಟ್ ಜೋಸೆಫ್ ಕಾಲೇಜಿನ ಗ್ರಂಥಪಾಲಕ ಡಾ.ಎಂ.ದೊರೈರಾಜನ್ ಅವರ ಮಾರ್ಗದರ್ಶನದಲ್ಲಿ, “ಮ್ಯಾಪಿಂಗ್ ಆಫ್ ರಿಸರ್ಚ್ ಪ್ರೊಡಕ್ಟಿವಿಟಿ ಇನ್ ಗ್ರೀನ್ ಎಕನಾಮಿಕ್ಸ್ : ಎ ಬಿಬ್ಲಿಯೋಮೆಟ್ರಿಕ್ ಸ್ಟಡಿ” ಎಂಬ ಪ್ರಬಂಧವನ್ನು ಅವರು ಪಿ.ಎಚ್.ಡಿ ಗಾಗಿ ಮಂಡಿಸಿದ್ದಾರೆ. ಶ್ರೀನಿವಾಸ ಅವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸಿದ್ದಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







