ನಗರದಲ್ಲಿ ನೀರಿನ ಬವಣೆ ಹೆಚ್ಚಾಗಿದ್ದು, ಯುವ ಸಂಘಟನೆಗಳು ಈ ಸಮಸ್ಯೆಗೆ ಸ್ಪಂದಿಸಿ ಉಚಿತವಾಗಿ ನೀರು ಸರಬರಾಜು ಮಾಡುತ್ತಿರುವ ಸಂಗತಿ ಶ್ಲಾಘನೀಯ ಎಂದು ನಿವೃತ್ತ ಪ್ರಾಂಶುಪಾಲ ಮಹಮ್ಮದ್ ಖಾಸಿಂ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಭಾನುವಾರ ವಿ ಕೇರ್ಸ್ ಯು ಫೌಂಡೇಷನ್ ವತಿಯಿಂದ ನೀರಿನ ತೊಂದರೆಯಿರುವ ವಾರ್ಡುಗಳಿಗೆ ಉಚಿತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಅಗಾಧವಾಗಿದೆ. ಶಿಡ್ಲಘಟ್ಟ ನಗರವೂ ಈ ಸಮಸ್ಯೆಯಿಂದ ಬಳಲುತ್ತಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿಫಲರಾಗಿರುವುದರಿಂದ ಯುವ ಸಂಘಟನೆಗಳು ಉಚಿತ ಸೇವೆ ನೀಡುವ ಮೂಲಕ ಮಾದರಿಯಾಗಿವೆ. ಪ್ರತಿ ದಿನ 25 ಟ್ಯಾಂಕರುಗಳ ಮೂಲಕ ನೀರಿನ ತೊಂದರೆಯಿರುವೆಡೆ ಸರದಿಯಂತೆ ನೀರನ್ನು ಉಚಿತವಾಗಿ ಹಂಚಲಾಗುತ್ತಿದೆ. ವಿ ಕೇರ್ಸ್ ಯು ಪೌಂಡೇಶನ್ಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ವಿ ಕೇರ್ಸ್ ಯು ಫೌಂಡೇಷನ್ ಅಧ್ಯಕ್ಷ ಮುಜಾಮಿಲ್, ಸದಸ್ಯರಾದ ಎಸ್.ಎ.ಸಾದಿಕ್, ನೂರುಲ್ಲಾ, ಸಾದಿಕ್, ರೆಹಮಾನ್, ಸೈಫ್ ಮಹಮದ್, ಸಯ್ಯದ್, ಖಾಸಿಂ, ಇಮ್ರಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -