15.1 C
Sidlaghatta
Monday, December 22, 2025

ಮನೆ ಕುಸಿತದಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ವಿತರಣೆ

- Advertisement -
- Advertisement -

ತಾಲ್ಲೂಕಿನಾದ್ಯಂತ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕರಿಯಪ್ಪನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಇಬ್ಬರು ಮೃತಪಟ್ಟಿದ್ದು ಅವರ ಕುಂಟುಂಬದವರಿಗೆ ಸರ್ಕಾರದಿಂದ ತಲಾ 4 ಲಕ್ಷ ರೂಗಳ ಪರಿಹಾರ ಘೋಷಣೆಯಾಗಿದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಪ್ಪನಹಳ್ಳಿ ಗ್ರಾಮಕ್ಕೆ ಭಾನುವಾರ ಶಾಸಕ ಎಂ.ರಾಜಣ್ಣ ಅವರೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು. ಈಗ ತಕ್ಷಣ ಮೃತರ ಕುಟುಂಬದವರಿಗೆ ಒಂದು ಲಕ್ಷ ರೂಗಳ ಚೆಕ್ ನೀಡುತ್ತಿದ್ದು ಉಳಿದ ಹಣವನ್ನು ಶೀಘ್ರವಾಗಿ ನೀಡಲಾಗುತ್ತದೆ ಎಂದು ಹೇಳಿದರು.
ತಾಲ್ಲೂಕಿನಾದ್ಯಂತ ನಾಲ್ಕು ಹೋಬಳಿಗಳಲ್ಲಿ 49 ಮನೆಗಳು ಸಂಪೂರ್ಣವಾಗಿ ಕುಸಿದಿದ್ದರೆ, 267 ಮನೆಗಳು ಭಾಗಶಃ ಕುಸಿದಿದೆ. 3,200 ಎಕರೆಯಷ್ಟು ರಾಗಿ ಹೊಲಗಳಿಗೆ ತೊಂದರೆಯಾಗಿದ್ದು 99,05,020 ರೂಗಳಷ್ಟು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.. ಇನ್ನೂ ಮಳೆಯಿಂದಾಗಿ ಇನ್ನಷ್ಟು ಮನೆಗಳು ಜಖಂಗೊಳ್ಳುವ ಅಂದಾಜಿದ್ದು, ಈಗಿನ ಮನೆಗಳ ನಷ್ಟದ 97,86,500 ರೂಗಳ ಜೊತೆಗೆ 2,13,500 ರೂಗಳನ್ನು ಬಿಡುಗಡೆ ಮಾಡಲು ಮೇಲಿನ ಅಧಿಕಾರಿಗಳಿಗೆ ವರದಿ ನೀಡಿರುವುದಾಗಿ ತಿಳಿಸಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!