ಸಂತೆಯಲ್ಲಿ ಏರಿದ ತರಕಾರಿ ಬೆಲೆಗೆ ಕಂಗಾಲಾದ ಗ್ರಾಹಕರು

- Advertisement -
- Advertisement -

ಕಳೆದ ಎರಡು ತಿಂಗಳ ಹಿಂದೆ ೨೦ ದಿನಗಳ ಕಾಲ ಬಿದ್ದಂತಹ ಜಡಿಮಳೆಯ ಪರಿಣಾಮವಾಗಿ ಮಾರುಕಟ್ಟೆಗೆ ತರಕಾರಿ ಬಾರದೆ ಇರುವುದರಿಂದ ಬೆಲೆಗಳು ದುಪ್ಪಟ್ಟಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ನಗರದಲ್ಲಿ ಸೋಮವಾರದಂದು ನಡೆದ ವಾರದ ಸಂತೆಯಲ್ಲಿ ತರಕಾರಿ ಖರೀದಿಗಾಗಿ ಬಂದಿದ್ದ ಗ್ರಾಹಕರು ತರಕಾರಿ ಬೆಲೆಗಳನ್ನು ಕೇಳಿ ಬೆಚ್ಚಿಬೀಳುವಂತಾಗಿದ್ದರು.
ಆಲೂಗಡ್ಡೆ ಪ್ರತಿ ಕೆ.ಜಿಗೆ ೨೦ರೂ, ಈರುಳ್ಳಿ ೨೦ರೂ, ಬೀನ್ಸ್ ೬೦ರೂ, ಕ್ಯಾರೇಟ್ ೮೦ರೂ, ನವಕೋಲು ೬೦ರೂ, ಮೂಲಂಗಿ ೪೦ರೂ, ಬೆಳ್ಳುಳ್ಳಿ ೧೨೦ರೂ, ಹಸಿಮೆಣಸಿನಕಾಯಿ ೫೦ರೂ, ಟಮೋಟೊ ೪೦ರೂ, ಬದನೆಕಾಯಿ ೬೦ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, ಮಧ್ಯಮವರ್ಗದ ಕುಟುಂಬಗಳ ಜನರು ತರಕಾರಿಗಳ ಖರೀದಿಗೆ ಹಿಂದೇಟು ಹಾಕುವಂತಾಗಿತ್ತು.
‘ಮಾರುಕಟ್ಟೆಗೆ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ, ೧೫ ಸಾವಿರ ರೂಪಾಯಿಗಳ ಬಂಡವಾಳ ಹಾಕಿದರೂ ಕೂಡಾ ಖರೀದಿ ಮಾಡಲು ಗ್ರಾಹಕರು ಸರಿಯಾಗಿ ಬರುತ್ತಿಲ್ಲ, ಒಂದು ಕೆ.ಜಿ.ತೆಗೆದುಕೊಳ್ಳುತ್ತಿದ್ದ ಗ್ರಾಹಕರು ಕಾಲು ಕೆ.ಜಿ. ಖರೀದಿ ಮಾಡುತ್ತಿದ್ದಾರೆ, ತರಕಾರಿಗಳನ್ನು ಹೆಚ್ಚು ದಿನಗಳ ಕಾಲ ಶೇಖರಣೆ ಮಾಡಲು ಸಾಧ್ಯವಾಗುತ್ತಿಲ್ಲ ಇದರಿಂದ ಆರ್ಥಿಕವಾಗಿ ನಮಗೆ ಹೊರೆಯಾಗುತ್ತಿದೆ’ ಎಂದು ತರಕಾರಿ ವ್ಯಾಪಾರ ಮಾಡುವ ಭಾಗ್ಯಮ್ಮ ತಮ್ಮ ತೊಂದರೆಯನ್ನು ವಿವರಿಸಿದರು.
‘ಮನೆಗಳಿಗೆ ತರಕಾರಿಗಳನ್ನ ಖರೀದಿ ಮಾಡುವುದು ತುಂಬಾ ಕಷ್ಟಕರವಾಗಿದೆ. ಇಲ್ಲಿನ ಬೆಲೆಗಳಿಗೆ ಅನುಗುಣವಾಗಿ ಖರೀದಿ ಮಾಡಬೇಕಾದರೆ, ವಾರವೆಲ್ಲಾ ಕೂಲಿ ಮಾಡಿದರೂ ತರಕಾರಿಗೆ ಹಣ ಸಾಕಾಗುವುದಿಲ್ಲ’ ಎನ್ನುತ್ತಾರೆ ಸೀತಹಳ್ಳಿಯ ಬೈರೇಗೌಡ.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!