ಸಾಂಜಿ ಕಲಾವಿದರಿಂದ ಮಕ್ಕಳಿಗೆ ಕಾಗದ ಕಲಾಕೃತಿಗಳ ತಯಾರಿಕೆಯ ಕಲಿಕೆ

- Advertisement -
- Advertisement -

ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಒಂದು ದಿನದ ಕಾಗದ ಕಲಾಕೃತಿ ತಯಾರಿಕೆಯ ಕಾರ್ಯಾಗಾರದಲ್ಲಿ ಸಾಂಜಿ ಕಲಾವಿದ ಎಸ್.ಎಫ್.ಹುಸೇನಿ ಮೈಸೂರು ಮಾತನಾಡಿದರು.
ಕಾಗದ ಕಲಾಕೃತಿಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಅವರಿಗೆ ಜಾಮಿತಿ, ಬಣ್ಣಗಳು, ೨ಡಿ ಮತ್ತು ೩ಡಿಗಳ ಬಗ್ಗೆಯೂ ತಿಳಿವಳಿಕೆ ಮೂಡಿಸಬಹುದು ಎಂದು ಅವರು ತಿಳಿಸಿದರು.
ಮಕ್ಕಳಿಗೆ ಪಠ್ಯದಲ್ಲಿನ ವಿಚಾರಗಳ ಮೂಲಕವೇ ಕಲೆಯೆಡೆಗೆ ಆಕರ್ಷಿತಗೊಳಿಸಬಹುದಾಗಿದೆ. ಬಣ್ಣಬಣ್ಣದ ಕಾಗದಗಳನ್ನು ನಿರ್ದಿಷ್ಟವಾಗಿ ಮಡಚುವ ಮೂಲಕ ತ್ರಿಭುಜ, ಚೌಕಘನ, ಆಯತಘನ ಮೊದಲಾದ ಚಾಮಿತಿಯ ಆಕಾರಗಳನ್ನು ತಯಾರಿಸಿ, ನಂತರ ಅವುಗಳನ್ನು ಬಳಸಿ ಪೆನ್ ಸ್ಟ್ಯಾಂಡ್, ಗಿಫ್ಟ್ ಬಾಕ್ಸ್ ಮುಂತಾದವುಗಳನ್ನು ತಯಾರಿಸುವುದನ್ನು ಕಲಿಸಲಾಯಿತು. ಇದು ಅವರ ಪಠ್ಯದಲ್ಲಿನ ವಿಚಾರಗಳನ್ನು ಮನಸ್ಸಿನಲ್ಲಿ ಮೂಡಿಸಲು ನೆರವಾಗುತ್ತದೆ. ಇದಲ್ಲದೆ ಮಕ್ಕಳಿಗೆ ವಿವಿಧ ರೀತಿಯ ಕಾಗದ ಕಲಾಕೃತಿ ಮಾಡುವುದನ್ನು ಕಲಿಸಿದ್ದೇನೆ ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಸರಸ್ವತಮ್ಮ ಮಾತನಾಡಿ, ಕಲೆಯ ಮೂಲಕ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಧ್ಯವಾಗಿಸಬಹುದು. ಅದರಲ್ಲೂ ಪಠ್ಯಕ್ಕೆ ಪೂರಕವಾದ ಕಲೆಯು ಮಕ್ಕಳಿಗೆ ಹೆಚ್ಚು ಆಪ್ತವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ.ದೇವರಾಜ್, ಡಿ.ಎಸ್.ಶ್ರೀಕಾಂತ್, ಕೆ.ಎ.ನಾಗರಾಜ್ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!