20.1 C
Sidlaghatta
Monday, December 29, 2025

ಸಾಮೂಹಿಕ ವಾದ್ಯಗೋಷ್ಠಿ ಹಾಗೂ ಶ್ರೀರಾಮದೇವರ ಪಲ್ಲಕ್ಕಿ ಉತ್ಸವ

- Advertisement -
- Advertisement -

ತಾಲ್ಲೂಕು ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಗೌಡನಹಳ್ಳಿಯಲ್ಲಿ ಸವಿತಾ ಸಮಾಜ, ಗೌಡನಹಳ್ಳಿಯ ಜಿ.ಪಿ.ವೆಂಕಟರಾಯಪ್ಪ ಹಾಗೂ ಗೌಡನಹಳ್ಳಿ, ಧನಮಿಟ್ಟೇನಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಸಾಮೂಹಿಕ ವಾದ್ಯಗೋಷ್ಠಿ ಹಾಗೂ ಶ್ರೀರಾಮದೇವರ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ವಿವಿದಡೆಯಿಂದ ಆಗಮಿಸಿದ್ದ ೭೦ ಮಂದಿ ಕಲಾವಿದರು ಏಕ ಕಾಲಕ್ಕೆ ೩ ಗಂಟೆಗಳ ಕಾಲ ನಾದಸ್ವರ, ಸಾಕ್ಸಾಫೋನ್, ಡೋಲನ್ನು ನುಡಿಸಿದರು. ಗ್ರಾಮದ ನಡು ಬೀದಿಯಲ್ಲಿ ಸಾಲಾಗಿ ಕುಳಿತ ಕಲಾವಿದರ ಕಲಾಸ್ವರಕ್ಕೆ ಸಭಿಕರು ತಲೆತೂಗಿದರು.
ಕಳೆದ ಮೂರು ವರ್ಷಗಳಿಂದಲು ಈ ಗ್ರಾಮದಲ್ಲಿ ಸಾಮೂಹಿಕ ನಾದಸ್ವರ, ಡೋಲು ಹಾಗೂ ಸಾಕ್ಸಾಫೋನ್ ವಾದನವನ್ನು ನಡೆಸಿಕೊಂಡು ಬರುತ್ತಿದ್ದು ಕಲಾಸಕ್ತರನ್ನು ಆಕರ್ಷಿಸಿದೆ.
ಕನ್ನಡ ಹಾಗೂ ತೆಲುಗಿನ ಹಲವು ಜನಪದ ಗೀತೆಗಳನ್ನು ನುಡಿಸಿದ ಕಲಾವಿದರು ತಡರಾತ್ರಿಯವರೆಗೂ ಕಲಾಸಕ್ತರು ಕೊರೆಯುವ ಚಳಿಯಲ್ಲೂ ಕದಲದ ಕೂತಲ್ಲೆ ಕೂರುವಂತೆ ತಮ್ಮ ಕಲೆಯ ಮೂಲಕ ಸೆರೆ ಹಿಡಿದಿದ್ದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀರಾಮ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ಹಿರಿಯ ಸಾಧಕ ಕಲಾವಿದರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಶಾಸಕ ವಿ.ಮುನಿಯಪ್ಪ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡ ಬೆಳ್ಳೂಟಿ ಸಂತೋಷ್, ಜಿ.ಪಿ.ವೆಂಕಟರಾಯಪ್ಪ, ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಸದಸ್ಯ ಜಿ.ಕೆ.ವೆಂಕಟರೆಡ್ಡಿ, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಬೆಳ್ಳೂಟಿ ರಮೇಶ್ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!