ಸುಮಾರು ೨೦ ಮಂದಿ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ತಂಡದ ಸದಸ್ಯರು ಸೋಮವಾರ ಸೈಕಲ್ ತುಳಿಯುತ್ತಾ ನಗರದೆಲ್ಲೆಡೆ ಜನರಿಗೆ ಮತದಾನದ ಕುರಿತಾಗಿ ಕರಪತ್ರವನ್ನು ನೀಡುತ್ತಾ, ಖಡ್ಡಾಯವಾಗಿ ಮತದಾನ ಮಾಡುವಂತೆ ಕೋರಿದರು.
“ನಾವು ಮೂರು ದಿನಗಳ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಜಿಲ್ಲೆಯ ವಿವಿಧ ಭಾಗಗಳ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ತಂಡದಲ್ಲಿದ್ದಾರೆ. ಜಿಲ್ಲಾ ಸ್ವೀಪ್ ಸಮಿತಿಯ ಪರವಾಗಿ ನಾವು ಜನರಲ್ಲಿ ಮತದಾನದ ಕುರಿತಾಗಿ ಅರಿವು ಮೂಡಿಸುತ್ತಾ, ಖಡ್ಡಾಯವಾಗಿ ಮತದಾನ ಮಾಡುವಂತೆ ಕೋರುತ್ತಿದ್ದೇವೆ. ಗುಡಿಬಂಡೆಯಿಂದ ಹೊರಟು ಗೌರಿಬಿದನೂರು, ಬಾಗೇಪಲ್ಲಿ, ಸಾದಲಿ, ಚಿಂತಾಮಣಿ ನೋಡಿಕೊಂಡು ಶಿಡ್ಲಘಟ್ಟಕ್ಕೆ ಬಂದಿದ್ದೇವೆ. ನಮ್ಮ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ” ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತ ಪ್ರಕಾಶ್ ತಿಳಿಸಿದರು.
- Advertisement -
- Advertisement -
- Advertisement -







