ಮೂಢನಂಬಿಕೆಗಳಿಗೆ ಬಲಿಯಾಗದಿರಿ, ಮನುಷ್ಯತ್ವಕ್ಕೆ ಬೆಲೆ ಕೊಡಿ. ಹಾಲನ್ನು ಕುಡಿಯದ ನಾಗರಹಾವಿನ ಹೆಸರಿನಲ್ಲಿ ಹುತ್ತಕ್ಕೆ ಹಾಲೆರೆದು ವ್ಯರ್ಥ ಮಾಡದಿರಿ. ಅಪೌಷ್ಠಿಕತೆಯಿಂದ ಬಳಲುವ ಕಂದಮ್ಮಗಳಿಗೆ ಅದೇ ಹಾಲನ್ನು ನೀಡುವ ಮೂಲಕ ಮಾನವತೆಗೆ ಅರ್ಥಕೊಡೋಣ ಎಂದು ಬಹುಜನ ವಿದ್ಯಾರ್ಥಿ ಸಂಘದ ಸದಸ್ಯರು ಕರೆ ನೀಡಿದರು.
ನಗರದ ಸಿದ್ಧಾರ್ಥ ಕಾಲೋನಿಯಲ್ಲಿ ಸೋಮವಾರ ಅಂಗನವಾಡಿ ಮಕ್ಕಳಿಗೆ ಹಾಲನ್ನು ನೀಡಿ ಅವರು ನಾಗರಪಂಚಮಿಯಂದು ವಿಗ್ರಹಕ್ಕೆ ಮತ್ತು ಹುತ್ತಕ್ಕೆ ಅವೈಜ್ಞಾನಿಕವಾಗಿ ಹಾಲನ್ನು ಸುರಿದು ಪೋಲು ಮಾಡಿರುವ ಬಗ್ಗೆ ವಿಷಾಧಿಸಿದರು.
ನಮ್ಮ ಸಮಾಜದಲ್ಲಿ ಎಷ್ಟೋ ಮಕ್ಕಳು, ಕುಟುಂಬಗಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅಂತಹ ಬಡ ಮಕ್ಕಳಿಗೆ ಹಾಲನ್ನು ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆಯೋಣ. ಮೂಢ ಕಂದಾಚಾರಗಳಿಗೆ ಬಲಿಯಾಗುವುದು ಬೇಡ ಎಂದು ಪ್ರತಿಪಾದಿಸಿದರು.
ಬಹುಜನ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ದಿಲೀಪ್, ಕೋಆರ್ಡಿನೇಟರ್ ಮೂರ್ತಿ, ಸದಸ್ಯರಾದ ದೇವರಾಜ್, ಗಂಗಾಧರ್, ನರೇಶ್ಬಾಬು, ಸುಂದರರಾಜ್, ಕೆ.ರವಿ, ರಾಮು, ವೆಂಕಟರಾಜು, ಉಸ್ಮಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







