ತೆಲುಗು ಚಿತ್ರನಟ ರಾಜಕಾರಣಿ ಡಾಕ್ಟರ್ ಪದ್ಮಭೂಷಣ ಚಿರಂಜೀವಿ ರವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಶಿಡ್ಲಘಟ್ಟ ತಾಲೂಕು ಮೆಗಾಸ್ಟಾರ್ ಚಿರಂಜೀವಿ ಅಸೋಶಿಯೇಷನ್ ವತಿಯಿಂದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಪೂಜೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷರಾದ ದಿನೇಶ್ ಬಾಬು, ಚಿರಂಜೀವಿ ಅಭಿಮಾನಿಗಳ ಬಳಗದ ಉಪಾಧ್ಯಕ್ಷರಾದ ದೇವರಾಜ್, ಕಸಾಪ ನಗರ ಘಟಕದ ಅಧ್ಯಕ್ಷ ಸಿ ಎನ್ ಮುನಿರಾಜ್, ರಾಮದಾಸ್, ವೆಂಕಟರೆಡ್ಡಿ, ವೆಂಕಟರಮಣ, ಬಂಗಾರು ಶ್ರೀನಿವಾಸ್, ದಾಮೋದರ್, ರಾಮಾಂಜನೇಯ, ರಾಧಾಕೃಷ್ಣ ಹಾಗೂ ಇನ್ನೂ ಮುಂತಾದ ಚಿರಂಜೀವಿಯ ಅಭಿಮಾನಿಗಳು ಸೇರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.