ಹೊಸಪೇಟೆ ಗ್ರಾಮದಲ್ಲಿ ಶ್ರೀ ದುಗ್ಗಲಮ್ಮ ತಾಯಿ ಜಾತ್ರೆ

- Advertisement -
- Advertisement -

ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ಪುರಾತನ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಪದ್ಧತಿಯಂತೆ ಮಂಗಳವಾರ ಹರಿಜನ ಕಾಲೋನಿ ಜನರು ಶ್ರೀ ದುಗ್ಗಲಮ್ಮ ತಾಯಿ ಜಾತ್ರೆಯನ್ನು ಅತ್ಯಂತ ಸರಳವಾಗಿ ಮತ್ತು ಸಂಪ್ರದಾಯಕವಾಗಿ ಆಚರಿಸಿದರು.

ಜಾತ್ರೆ ಅಂಗವಾಗಿ ಮಹಿಳೆಯರು ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ದೇವರಿಗೆ ದೀಪಗಳನ್ನು ಬೆಳಗಿದರು.

ದೇಶದೆಲ್ಲಡೆ  ಕೊರೊನ ಅಟ್ಟಹಾಸ ಹೆಚ್ಚಾಗಿರುವುದರಿಂದ ದೇವರ ಕೃಪೆಯು ಜನರಿಗೆ ಬೇಕಾಗಿರುವುದರಿಂದ ಭಕ್ತಿ ಪೂರ್ವಕವಾಗಿ  ನಮಿಸಿ ಕೊರೊನ ಮಹಾಮಾರಿಯಿಂದ ಮುಕ್ತಿ ಪಡೆದು ಎಲ್ಲರೂ ಆರೋಗ್ಯವಂತರಾಗಿ ಇರುವಂತೆ ದೇವರಲ್ಲಿ ಬೇಡಿಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದರು.

ಈ ಸಂದರ್ಭದಲ್ಲಿ  ಗ್ರಾಮಸ್ಥರಾದ  ಮಾರಪ್ಪ, ನಾರಾಯಣಸ್ವಾಮಿ, ವೆಂಕಟೇಶ್, ಮುನಿರೆಡ್ಡಿ, ಮೂರ್ತಿ, ಗಂಗಾಧರ್, ತಿಮ್ಮಣ್ಣ,  ಆನಂದ, ಮದನ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!