ಶಿಡ್ಲಘಟ್ಟಕ್ಕೆ ಮುಂಬೈಯಿಂದ ಆಗಮಿಸಿರುವ ಆರು ಮಂದಿಯನ್ನು ಆರೋಗ್ಯ ಇಲಾಖೆಯವರು ಬಿ.ಸಿ.ಎಂ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್ ಮಾಡಿದ್ದಾರೆ.
ಬುಧವಾರ ಮುಂಬೈಯಿಂದ ಬೆಂಗಳೂರಿಗೆ ಉದ್ಯಾನ ಎಕ್ಸ್ ಪ್ರೆಸ್ಸ್ ರೈಲಿನಲ್ಲಿ ಆಗಮಿಸಿದ್ದ ಶಿಡ್ಲಘಟ್ಟ ಮೂಲದವರು ಮಧ್ಯಾಹ್ನ ನಗರಕ್ಕೆ ಆಗಮಿಸಿದ್ದರು. ನಗರದ ಬಸ್ ನಿಲ್ದಾಣದ ಬಳಿಯಿರುವ ದರ್ಗಾದ ಬಳಿ ವಾಸವಿರುವ ಅವರ ಮನೆಗೆ ಗುರುವಾರ ಶಿಡ್ಲಘಟ್ಟ ತಾಲ್ಲೂಕು ಕೊರೊನ ಟಾಸ್ಕ್ ಫೋರ್ಸ್ ತಂಡ ಭೇಟಿ ನೀಡಿದ್ದರು. ನಂತರ ಅವರ ಆರೋಗ್ಯ ಪರೀಕ್ಷಿಸಿ ನಗರದ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್ ಮಾಡಿದ್ದಾರೆ. ಐದನೇ ದಿನ ಅವರ ಸ್ವಾಬ್ ಪರೀಕ್ಷೆ ನಡೆಸಲಾಗುವುದೆಂದು ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ.
- Advertisement -
- Advertisement -
- Advertisement -
- Advertisement -