ನಗರದ ಹೊರವಲಯದಲ್ಲಿ ಚಿಂತಾಮಣಿ ರಸ್ತೆಯಲ್ಲಿರುವ ಸುಮಾರು 400 ವರ್ಷಕ್ಕೂ ಹಳೆಯದಾದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು ವಿಜಯ ದಶಮಿಯಂದು ಧ್ವಜಸ್ಥಂಬದ ಪ್ರತಿಷ್ಠಾಪನಾ ಕಾರ್ಯವನ್ನು ನಡೆಸಲಾಯಿತು.
ಶ್ರೀ ವೀರಾಂಜನೇಯಸ್ವಾಮಿ ಬಲಿಜ ಸೇವಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯದಲ್ಲಿ ಹಲವಾರು ಮಂದಿ ಭಕ್ತರು ತೊಡಗಿಸಿಕೊಂಡಿದ್ದಾರೆ. ಸೋಮವಾರ ನಡೆದ ಧ್ವಜಸ್ಥಂಬದ ಪ್ರತಿಷ್ಠಾಪನಾ ಕಾರ್ಯದ ನಿಮಿತ್ತ ವಿವಿಧ ಹೋಮ, ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು.
ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿವರ್ಷ ಶ್ರೀರಾಮನವಮಿಯಂದು ಉಟ್ಲು ಜಾತ್ರೋತ್ಸವವನ್ನು ಸುಮಾರು ತೊಂಬತ್ತು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಜೈ ಬಜರಂಗಬಲಿ ವ್ಯಾಯಾಮಶಾಲೆಯೂ ಸಹ ಇಲ್ಲಿಯೆ ಇದ್ದು ಹಿಂದಿನ ತಲೆಮಾರಿನ ಪ್ರಸಿದ್ಧ ಗರಡಿ ಮನೆ ಇದಾಗಿತ್ತು.
ಶ್ರೀ ವೀರಾಂಜನೇಯಸ್ವಾಮಿ ಬಲಿಜ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಶಂಕರ್, ಉಪಾಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿಗಳಾದ ಆರ್.ಶ್ರೀನಿವಾಸ್, ಜೆರಾಕ್ಸ್ ಕೃಷ್ಣಯ್ಯ, ಕೆ.ವಿ.ಅನಂತು, ಮುರಳೀಧರ್, ಮಧುಸೂದನ್ ಹಾಜರಿದ್ದರು.