Home News ಬಾಲಕಾರ್ಮಿಕ ನಿರ್ಮೂಲನೆಗೆ ಕಾನೂನು ಜಾಗೃತಿ

ಬಾಲಕಾರ್ಮಿಕ ನಿರ್ಮೂಲನೆಗೆ ಕಾನೂನು ಜಾಗೃತಿ

0
Sidlaghatta Bashettahalli Child Labour Awareness

Bashettahalli, Sidlaghatta : ಶಿಡ್ಲಘಟ್ಟ: ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕುವ ಉದ್ದೇಶದಿಂದ ಶಿಡ್ಲಘಟ್ಟ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ ಮಾತನಾಡಿ, ಬಾಲ್ಯವಯಸ್ಸು ಜೀವನದ ವಿಕಸನದ ಹಂತ. ಅಂತಹ ಸಮಯದಲ್ಲಿ ಮಕ್ಕಳನ್ನು ಶಾಲೆಯಿಂದ ಬೇರೆಡೆ ಕರೆದೊಯ್ದು ದುಡಿಮೆಗೆ ತೊಡಗಿಸುವುದು ಅವರ ಭವಿಷ್ಯವನ್ನು ಕತ್ತಲೆಗೆ ದೂಡಿದಂತೆ ಎಂದು ಹೇಳಿದರು.

ಅಭಿವೃದ್ಧಿಶೀಲ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ. ಯಾವುದೇ ಮಕ್ಕಳನ್ನು ಶಾಲೆಯಿಂದ ದೂರವಿಡುವುದು ದೇಶದ ಉಜ್ವಲ ಭವಿಷ್ಯವನ್ನು ಹಿಂತೆಗೆಯುವಂತಾಗಿದೆ. ಈ ಸಮಸ್ಯೆ ಎದುರಿಸಲು ಕೇವಲ ಕಾನೂನು ಸಾಕಾಗದು, ಜನರು ಮಾನವೀಯ ಮೌಲ್ಯಗಳ ಆಧಾರದಲ್ಲಿ ಕಾರ್ಯನಿರ್ವಹಿಸಬೇಕು. ಪೋಷಕರು, ಶಿಕ್ಷಕರು ಮತ್ತು ಯುವಕರು ಈ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಹೇಳಿದರು.

ಕಾನೂನು ಪಾಲನೆಯೊಂದಿಗೆ ಸಾಮಾಜಿಕ ತಾಳ್ಮೆ, ಬದ್ಧತೆ ಅಗತ್ಯ. ಕಾನೂನು ನಮ್ಮ ಕೈಯಲ್ಲಿದೆ, ಆದರೆ ಅದನ್ನು ಕ್ರಿಯಾಶೀಲಗೊಳಿಸಲು ಜನರು ಉತ್ಸಾಹದಿಂದ ಬೆಂಬಲ ನೀಡಬೇಕು ಎಂದರು.

ಕಾರ್ಮಿಕ ಇಲಾಖೆಯ ನಿರೀಕ್ಷಕಿ ವಿಜಯಲಕ್ಷ್ಮಿ ಅವರು ಬಾಲಕಾರ್ಮಿಕ ನಿಷೇಧ ಕಾಯ್ದೆಗಳ ಕುರಿತು ಮಾಹಿತಿ ನೀಡುತ್ತಾ, ಮಕ್ಕಳನ್ನು ದುಡಿಮೆಗೆ ನೂಕುವುದು ಕೇವಲ ಶೋಷಣೆ ಅಲ್ಲ ಅದು ಮಕ್ಕಳ ಮಾನವೀಯ ಹಕ್ಕುಗಳಿಗೆ ಘಾತವಾಗಿದೆ. ನಾವು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ಬಾಲಕರ ದುಡಿಮೆ ಕಂಡುಬಂದಲ್ಲಿ ತಕ್ಷಣ ಕಾರ್ಮಿಕ ಇಲಾಖೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವುದು ಪ್ರಜ್ಞಾವಂತರ ಜವಾಬ್ದಾರಿ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸರೋಜಮ್ಮ, ನವ ಕರ್ನಾಟಕ ಕಾರ್ಮಿಕರ ಮಹಾಸಭಾದ ಅಧ್ಯಕ್ಷ ದೇವಪ್ಪ, ಪಂಚಾಯತ್ ಸಿಬ್ಬಂದಿ ಗಂಗಪ್ಪ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version