Home News ಇ-ಫವತಿ ಆಂದೋಲನಕ್ಕೆ ಚಾಲನೆ: ಮನೆ ಬಾಗಿಲಿಗೆ ಕಂದಾಯ ಸಿಬ್ಬಂದಿ

ಇ-ಫವತಿ ಆಂದೋಲನಕ್ಕೆ ಚಾಲನೆ: ಮನೆ ಬಾಗಿಲಿಗೆ ಕಂದಾಯ ಸಿಬ್ಬಂದಿ

0
Sidlaghatta e-pauti khata Campaign Tehsildar Gagana Sindhu

Sidlaghatta : ಮೃತಪಟ್ಟ ಹಿರಿಯರ ಹೆಸರಿನಲ್ಲಿರುವ ಆಸ್ತಿ ದಾಖಲೆಗಳನ್ನು ಅವರ ವಾರಸುದಾರರ ಹೆಸರಿಗೆ ಸುಲಭವಾಗಿ ಮತ್ತು ಶೀಘ್ರವಾಗಿ ಬದಲಾಯಿಸಲು ಕಂದಾಯ ಇಲಾಖೆ ಹಮ್ಮಿಕೊಂಡಿರುವ ‘ಇ-ಫವತಿ ಆಂದೋಲನ’ದ ಸದುಪಯೋಗ ಪಡೆದುಕೊಳ್ಳುವಂತೆ ತಹಶೀಲ್ದಾರ್ ಗಗನ ಸಿಂಧು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲ ಅಶ್ವತ್ಥಕಟ್ಟೆ ಬಳಿ ಬುಧವಾರ ಈ ಆಂದೋಲನದ ಕುರಿತು ಜನರಲ್ಲಿ ಅರಿವು ಮೂಡಿಸಿ ಅವರು ಮಾತನಾಡಿದರು.

ಫವತಿ ಖಾತೆ ಆಂದೋಲನದ ಉದ್ದೇಶ

ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ತಾಲ್ಲೂಕಿನಲ್ಲಿ ಅನೇಕ ಕುಟುಂಬಗಳಿಗೆ ಸಂಬಂಧಿಸಿದ ಆಸ್ತಿ ದಾಖಲೆಗಳು ಮೃತಪಟ್ಟ ಹಿರಿಯರ ಹೆಸರಿನಲ್ಲೇ ಉಳಿದುಕೊಂಡಿವೆ. ವರ್ಷಗಳೇ ಕಳೆದರೂ ಅವು ವಾರಸುದಾರರಾದ ಮಕ್ಕಳು ಅಥವಾ ಮೊಮ್ಮಕ್ಕಳ ಹೆಸರಿಗೆ ಬದಲಾಗಿಲ್ಲ.

ಇದರಿಂದಾಗಿ ಆಸ್ತಿಯ ವಿಭಾಗ, ಪಾಲುದಾರಿಕೆ, ಮಾರಾಟ, ಬ್ಯಾಂಕ್‌ನಲ್ಲಿ ಅಡ ಇಟ್ಟು ಸಾಲ ಪಡೆಯುವುದು ಅಥವಾ ದಾಖಲೆಗಳನ್ನು ಭದ್ರಪಡಿಸಿಕೊಳ್ಳುವಂತಹ ಕೆಲಸಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಆಸ್ತಿ ವಿವಾದಗಳು ಒಂದೇ ಕುಟುಂಬದ ಸದಸ್ಯರ ನಡುವೆ ಕಲಹಗಳಿಗೂ ಕಾರಣವಾಗುತ್ತಿದೆ.

ಈ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರವು ಕಂದಾಯ ಇಲಾಖೆ ಮೂಲಕ ‘ಫವತಿ ಖಾತೆ ಆಂದೋಲನ’ ಹಮ್ಮಿಕೊಂಡಿದೆ. ಎಂದು ತಿಳಿಸಿದರು

ಜನರಿಗೆ ಸಿಗುವ ಪ್ರಯೋಜನಗಳು

‘ಇ-ಫವತಿ’ ಆಂದೋಲನದಡಿ ಕಂದಾಯ ಇಲಾಖೆ ಸಿಬ್ಬಂದಿ ಸ್ವತಃ ಜನರ ಮನೆ ಬಾಗಿಲಿಗೆ ಬಂದು ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಇದರಿಂದ ಜನರಿಗೆ ಈ ಕೆಳಗಿನ ಪ್ರಯೋಜನಗಳಿವೆ:

  • ತಾಲ್ಲೂಕು ಕಚೇರಿ ಅಲೆದಾಟ ತಪ್ಪುತ್ತದೆ: ಫವತಿ ಖಾತೆಗಾಗಿ ವಿನಾಕಾರಣ ತಾಲ್ಲೂಕು ಕಚೇರಿ ಅಥವಾ ನಾಡ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ.
  • ಸಮಯ ಮತ್ತು ಹಣ ಉಳಿತಾಯ: ಅನಗತ್ಯ ಖರ್ಚು ಮತ್ತು ಅಮೂಲ್ಯ ಸಮಯ ಉಳಿತಾಯವಾಗುತ್ತದೆ.
  • ಆಸ್ತಿ ಭದ್ರತೆ: ಆಸ್ತಿ ದಾಖಲೆಗಳನ್ನು ಅಧಿಕೃತವಾಗಿ ಮತ್ತು ಕಾನೂನುಬದ್ಧವಾಗಿ ವಾರಸುದಾರರ ಹೆಸರಿಗೆ ಭದ್ರಪಡಿಸಿಕೊಳ್ಳಬಹುದು.

ಜನರು ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ, ಕುಟುಂಬದ ಎಲ್ಲರ ಒಮ್ಮತದಿಂದ ಇ-ಫವತಿ ಖಾತೆ ಮಾಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಮನವಿ ಮಾಡಿದರು.

ಈ ವೇಳೆ ಉಪ ತಹಶೀಲ್ದಾರ್ ಚೇತನ್, ಕಸಬಾ ಕಂದಾಯ ಅಧಿಕಾರಿ ವೇಣುಗೋಪಾಲ್, ವಿ.ಎ. ನಾಗರಾಜ್, ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version