ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳಿಬ್ಬರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು ಇನ್ನೊಬ್ಬ ಪರಾರಿಯಾಗಿದ್ದು ಬಂಧನಕ್ಕೆ ಬಲೆ ಬೀಸಿದ್ದಾರೆ.
ನಗರದ ಅಜಾದ್ ನಗರದ ವಾಸಿ ರೇಷ್ಮೆ ವ್ಯಾಪಾರಿ 25 ವರ್ಷದ ಸಯ್ಯದ್ ಫರ್ಹಾನ್ ನಗರದ ಹೊರವಲಯದ ಹನುಮಂತಪುರ ಗೇಟ್ನ ಲೇಔಟ್ವೊಂದರಲ್ಲಿ ನಿರ್ಮಾಣ ಹಂತದ ಮನೆಯೊಂದರಲ್ಲಿ ಕೊಲೆಯಾಗಿದ್ದ.
ಸೈಜುಗಲ್ಲಿನಿಂದ ಮುಖವನ್ನು ಜಜ್ಜಿ, ಮಾರಕಾಯುಧಗಳಿಂದ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದ್ದರು. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು.
ಕೊಲೆ ಆರೋಪಿಗಳ ಪೈಕಿ ಒಬ್ಬನಾದ ಮನ್ಸೂರ್ ಸಿಕ್ಕಿ ಹಾಕಿಕೊಂಡಿದ್ದು ನವಾಜ್ ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.
ಮನ್ಸೂರ್ ಬೈಕ್ ವ್ಹೀಲಿಂಗ್ ನಡೆಸುತ್ತಿದ್ದು ಬೈಕ್ ವ್ಹೀಲಿಂಗ್ ನಡೆಸದಂತೆ ಕೊಲೆಯಾದ ಸಯ್ಯದ್ ಪರ್ಹಾನ್ ಎಚ್ಚರಿಕೆ ನೀಡಿದ್ದ. ಆ ವಿಚಾರವಾಗಿಯೆ ಕೊಲೆ ಮಾಡಿದೆ ಎಂದು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಮನ್ಸೂರ್ ಹೇಳಿದ್ದಾನಾದರೂ ಅದನ್ನು ಕೊಲೆಯಾದ ಫರ್ಹಾನ್ನ ಕುಟುಂಬದವರು ಒಪ್ಪುತ್ತಿಲ್ಲ.
ಕೊಲೆಗೆ ಬೇರೆಯದೇ ಏನೋ ಕಾರಣ ಇದ್ದು ಅದನ್ನು ತನಿಖೆ ಮಾಡಿ ಪತ್ತೆ ಹಚ್ಚಬೇಕು, ಇಬ್ಬರೂ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಅವರು ಒತ್ತಾಯಿಸಿದ್ದಾರೆ.