ತಾಲ್ಲೂಕಿನ ಬಸವಾಪಟ್ಟಣದ ರೇಷ್ಮೆ ಬೆಳೆಗಾರ ನಾರಾಯಣಸ್ವಾಮಿ ಅವರ ಚಂದ್ರಂಕಿಗಳ ಶೆಡ್ ಮೇಲೆ ಅರಳಿ ಮರವೊಂದು ಉರುಳಿಬಿದ್ದಿದ್ದು ಸುಮಾರು ಏಳರಿಂದ ಎಂಟು ಲಕ್ಷ ರೂಗಳ ನಷ್ಟವಾಗಿದೆ.
ಶನಿವಾರ ರಾತ್ರಿ ಬಿದ್ದ ಮಳೆಗೆ ಅರಳಿ ಮರವು ಬುಡ ಸಮೇತ ಚಂದ್ರಂಕಿಗಳ ಶೆಡ್ ಮೇಲೆ ಉರುಳಿದೆ. ರಾತ್ರಿ ವೇಳೆ ಇಲ್ಲಿ ಯಾರೂ ಇರದಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
“ಕೊರೊನಾ ಕಾರಣದಿಂದಾಗಿ ಕಳೆದ ನಾಲ್ಕು ತಿಂಗಳುಗಳಿಂದಲೂ ರೇಷ್ಮೆ ಬೆಳೆಯಲ್ಲಿ ನಷ್ಟವನ್ನೇ ಅನುಭವಿಸುತ್ತಿದ್ದೇವೆ. ಈಗ ರೇಷ್ಮೆಯನ್ನೇ ನಂಬಿರುವ ನಮಗೆ ಮರ ಉರುಳಿರುವುದರಿಂದ ಇರುವ ಅಪಾರ ನಷ್ಟವುಂಟಾಗಿದೆ. ಸರ್ಕಾರ ನಮ್ಮ ಕೈಹಿಡಿಯಬೇಕು. ತಾಲ್ಲೂಕು ಆಡಳಿತ ನೆರವಾಗಬೇಕು” ಎಂದು ರೇಷ್ಮೆ ಬೆಳೆಗಾರ ನಾರಾಯಣಸ್ವಾಮಿ ತಿಳಿಸಿದರು.