19.2 C
Sidlaghatta
Monday, March 2, 2026

ಇದ್ಲೂಡು ರಸ್ತೆಯಲ್ಲಿನ ಮಾರುತಿ ನಗರದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

- Advertisement -
- Advertisement -

ಪಟ್ಟಣದ ಹೊರವಲಯದ ಇದ್ಲೂಡು ರಸ್ತೆಯಲ್ಲಿನ ಮಾರುತಿ ನಗರದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ 19 ನೇ ವರ್ಷದ ಉಟ್ಲು ಮಹೋತ್ಸವವನ್ನು ಆಯೋಜಿಸಲಾಗಿತ್ತು.
ಬೆಳಿಗ್ಗೆ ದೇವರಿಗೆ ಪೂಜೆ, ಪಂಚಾಮೃತಾಭಿಷೇಕ, ಮಹಾಮಂಗಳಾರತಿಯ ನಂತರ ಹಾಲು ಉಟ್ಲು ಕಾರ್ಯಕ್ರಮವನ್ನು ನಡೆಸಲಾಯಿತು. ನಂತರ ಮನರಂಜನಾ ಉಟ್ಲು ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲ ಗ್ರಾಮಗಳು ಹಾಗೂ ಪಟ್ಟಣದಿಂದ ನೂರಾರು ಮಂದಿ ಭಕ್ತರು ಪೂಜೆಯಲ್ಲಿ ಮತ್ತು ಉಟ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಗಮಿಸಿದ್ದ ಭಕ್ತರಿಗೆಲ್ಲಾ ಮಾರುತಿ ನಗರದ ಯುವಕ ಬಳಗದ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಯಿತು. ಇದ್ಲೂಡು ಗ್ರಾಮಸ್ಥರು ಮತ್ತು ಮಲ್ಲೆಪ್ಪನವರ ಮಠದಿಂದ ಪಾನಕವನ್ನು ವಿನಿಯೋಗಿಸಲಾಯಿತು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!