“ಕಂಟ್ರೋಲ್ ರೂಮ್” ಮೂಲಕ ಜನರ ತುರ್ತು ಅಗತ್ಯ ನಿವಾರಣೆಗೆ ತಾಲ್ಲೂಕು ಆಡಳಿತ ಕ್ರಮ

- Advertisement -
- Advertisement -

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್.ಡಿ.ಎಲ್. ಸರ್ವಲೆನ್ಸ್ ಟೀಮ್ (ಕಣ್ಗಾವಲು ಘಟಕ)ದ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಆಡಳಿತದಿಂದ “ಕಂಟ್ರೋಲ್ ರೂಮ್” ತೆರೆಯಲಾಗುವುದು. ದಿನದ 24 ಗಂಟೆಗಳ ಕಾಲ ಅದು ಕಾರ್ಯನಿರ್ವಹಿಸಲಿದೆ. ಸೇವಾ ಮನೋಭಾವವುಳ್ಳ ವಿವಿಧ ಸಂಘಟನೆಗಳ ಸದಸ್ಯರ ನೆರವನ್ನು ಪಡೆದು, ಅಶಕ್ತರು, ವೃದ್ಧರು ಮುಂತಾದವರುಗಳಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡುವುದಾಗಿ ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.
“ಕಂಟ್ರೋಲ್ ರೂಮ್” ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಿಳಿಸಲಾಗುವುದು. ಯಾವುದೇ ರೀತಿಯ ಕುಂದುಕೊರತೆಗಳು, ಅಗತ್ಯ ವಸ್ತುಗಳು ಮುಂತಾದವುಗಳ ಬಗ್ಗೆ ತಿಳಿಸಿ ಸೇವೆ ಪಡೆಯಬಹುದು ಎಂದು ಅವರು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ನಮ್ಮ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹೊರದೇಶದಿಂದ ಬಂದಿರುವ ಯಾವುದೇ ವ್ಯಕ್ತಿಗೂ ಕೊರೊನಾ ಸೋಂಕಿನ ರೋಗಲಕ್ಷಣಗಳು ಕಂಡುಬಂದಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮಗಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ 21 ದಿನಗಳ ಕಾಲ ವಿಧಿಸಿರುವ ಗೃಹಬಂಧನಕ್ಕೆ ಬದ್ಧರಾಗಿರೋಣ. ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸೋಣ. ಜಂಗಮಕೋಟೆ, ದೊಡ್ಡದಾಸೇನಹಳ್ಳಿ ಗ್ರಾಮಗಳಲ್ಲಿ ಹುಡುಗರು, ಯುವಕರು ಹೊರಗೆ ಆಡುತ್ತಿದ್ದರಂತೆ. ಇದು ಅಕ್ಷಮ್ಯ ಅಪರಾಧ ಎಂದರು.
ತಳ್ಳುವ ಗಾಡಿಗಳಲ್ಲಿ ಎಲ್ಲೆಂದರಲ್ಲಿ ಹೋಗಿ ತರಕಾರಿ ಮತ್ತು ಹಣ್ಣುಗಳನ್ನು ಮಾರುವಂತಿಲ್ಲ. ಪ್ರತಿಯೊಂದು ವಾರ್ಡುಗಳಿಗೂ ಅನುಕೂಲವಾಗುವ ಹಾಗೆ ಅವರಿಗೆ ಸ್ಥಳವನ್ನು ನಿಗದಿಪಡಿಸಲಾಗುವುದು. ಅವರು ಆ ಸ್ಥಳದಲ್ಲಿಯೇ ಇದ್ದು ವ್ಯಾಪಾರ ಮಾಡಬೇಕು. ಜನರು ಕೊಳ್ಳಲು ಬರುವಾಗ ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಳ್ಳಬೇಕು. ಅಗತ್ಯ ವಸ್ತುಗಳನ್ನು ಕೊಳ್ಳಲು ಮನೆಗಳಿಂದ ಕೇವಲ ಒಬ್ಬರು ಮಾತ್ರ ಹೊರಬರಬೇಕು. ಮಕ್ಕಳನ್ನು ಕರೆತರುವುದಾಗಲೀ, ಕಳುಹಿಸುವುದಾಗಲೀ ಮಾಡಬಾರದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂತೆಯನ್ನು ನಡೆಸಲು ಕೆಲವೊಂದು ಮಾರ್ಗಸೂಚಿಗಳನ್ನು ವಿಧಿಸಲಾಗುವುದು. ರೈತರು ತಮ್ಮ ಉತ್ಪನ್ನಗಳನ್ನು ಮಾರ್ತಲು ಸಮಯವನ್ನು ನಿಗದಿಪಡಿಸಲಾಗುವುದು. ಹಾಗೆಯೇ ಜನರು ಕೊಳ್ಳಲು ಬಂದಾಗ ದೂರ ದೂರ ನಿಂತು ಸೋಷಿಯಲ್ ಡಿಸ್ಟೆನ್ಸ್ ಉಳಿಸಿಕೊಳ್ಳಬೇಕು.
ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ. ಕೆಲವೊಂದು ದುರಸ್ತಿ ಕಾರ್ಯಗಳಿಗೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಿಂದ ಹಳ್ಳಿಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ನೀಗಿಸಲು ನಾವು ಸಂಬಂಧಪಟ್ಟವರಿಗೆ ಐ.ಡಿ ಕಾರ್ಡ್ ವಿತರಿಸುತ್ತಿದ್ದೇವೆ. ಹಾರ್ಡ್ ವೇರ್ ಅಂಗಡಿಗಳಲ್ಲಿ ಪೈಪ್, ಕಾಲರ್, ನಟ್ಟು ಬೋಲ್ಟು ಮುಂತಾದ ಹಲವು ವಸ್ತುಗಳ ಅಗತ್ಯವಿರುತ್ತದೆ. ಈ ಸಮಸ್ಯೆಯನ್ನು “ಕಂಟ್ರೋಲ್ ರೂಮ್” ಮೂಲಕ ಬಗೆಹರಿಸಲಾಗುವುದು ಎಂದು ಹೇಳಿದರು.

ಟಾಸ್ಕ್ ಫೋರ್ಸ್ ರಚನೆ :

ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಒಂದೊಂದು ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಪಿ.ಡಿ.ಒ, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನೊಳಗೊಂಡ ತಂಡವಿದು. ಹೊರಗಿನಿಂದ ಯಾರೇ ಗ್ರಾಮಕ್ಕೆ ಬರಲಿ ಹೋಗಲಿ ಅವರ ಬಗ್ಗೆ ಈ ತಂಡ ನಿಗಾ ವಹಿಸಿ, ಮಾಹಿತಿಯನ್ನು ಕೇಂದ್ರ ಸ್ಥಾನಕ್ಕೆ ನೀಡುತ್ತಿರಬೇಕು. ಕೊರೊನಾ ರೋಗಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದರು.
ನಗರಸಭೆಯ ವತಿಯಿಂದಲೂ ಪ್ರತಿಯೊಂದು ವಾರ್ಡ್ ನಲ್ಲಿಯೂ ಚುನಾಯಿತ ಜನಪ್ರತಿನಿಧಿಗಳಿರುವ ಟಾಸ್ಕ್ ಫೋರ್ಸ್ ರಚಿಸಬೇಕು. ಈ ತಂಡ ಜನರು ಅತ್ಯಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರವಷ್ಟೇ ಹೊರಗೆ ಬರುವಂತೆ ನೋಡಿಕೊಳ್ಳಬೇಕು. ಉಳಿದಂತೆ ಮನೆಯಲ್ಲಿಯೇ ಇರುವಂತೆ ತಿಳಿಸಬೇಕು. ಯಾವುದೇ ವ್ಯಾಕ್ತಿ ಹೊರಗಿನಿಂದ ಬಂದನೆಂದರೆ ಗಮನಿಸಿ, ಕೇಂದ್ರಸ್ಥಾನಕ್ಕೆ ಮಹಿತಿ ನೀಡಬೇಕು ಎಂದು ಹೇಳಿದರು.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ನಗರಸಭೆ ಪೌರಾಯುಕ್ತ ತ್ಯಾಗರಾಜ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಣಿ, ನಗರಭೆ ಆರೋಗ್ಯಾಧಿಕಾರಿ ಶೋಭಾ, ಸಿ.ಡಿ.ಪಿ.ಒ ನಾಗಮಣಿ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!