ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಶ್ರೀದೇವಿ ಭೂದೇವಿ ಸಮೇತ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ತಿರುಕಲ್ಯಾಣೋತ್ಸವ ಹಾಗೂ ಮಹಾಸುದರ್ಶನ ನಾರಸಿಂಹ ಹೋಮವನ್ನು ನೆರವೇರಿಸಲಾಯಿತು.
ಪುರಾತನವಾದ ದೇವಾಲಯದಲ್ಲಿ ಶ್ರೀದೇವಿ ಭೂದೇವಿ ಸಮೇತ ಚನ್ನಕೇಶವಸ್ವಾಮಿಯನ್ನು ಪ್ರತಿಷ್ಠಾಪಿಸಿ ನಾನಾ ಹೂಗಳಿಂದ ಅಲಂಕರಿಸಿ, ವಿಶೇಷ ಪೂಜೆಯನ್ನು ನೆರವೇರಿಸಿ, ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಬೆಳಗ್ಗೆ ಸುಪ್ರಭಾತ ಸೇವೆ, ವೇದಸೂತ್ರ ದಿವ್ಯ ಪ್ರಬಂಧ ಪಾರಾಯಣದೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮಗಳು ಸಂಜೆಯವರೆಗೂ ನಡೆದವು. ಚನ್ನಕೇಶವಸ್ವಾಮಿಗೆ ವಿಶೇಷ ಫಲ ಪಂಚಾಮೃತ ಅಭಿಷೇಕ, ವಿಶೇಷ ತಿರುಕಲ್ಯಾಣ ಮಹೋತ್ಸವ, ಅಷ್ಟಾವಧಾನ, ರಾಷ್ಟ್ರಾಶೀರ್ವಾದ ಇನ್ನಿತರೆ ಸೇವೆಗಳನ್ನು ಸ್ವಾಮಿಗೆ ನೆರವೇರಿಸಲಾಯಿತು.
ಪ್ರಧಾನ ಅರ್ಚಕರಾದ ಚನ್ನಕೇಶವಾಚಾರ್ ಹಾಗೂ ಇತರ ಪುರೋಹಿತರ, ಆಗಮೀಕರ ತಂಡ ಈ ಎಲ್ಲ ಪೂಜೆ ಪುನಸ್ಕಾರ ಹೋಮ ಹವನಗಳನ್ನು ನಡೆಸಿಕೊಟ್ಟರು. ಕೊತ್ತನೂರು ಗ್ರಾಮದ ಹಲವು ದಂಪತಿಗಳು ಹೋಮಕ್ಕೆ ಕುಳಿತು ನವದಾನ್ಯ ಸೀರೆ ಕುಪ್ಪಸ ಶ್ರೀಗಂಧ, ರಾಗಿ ಮರದ ತುಂಡುಗಳನ್ನು ಹೋಮಕ್ಕೆ ಅರ್ಪಿಸಿದರು.
ಕೊತ್ತನೂರು ಹಾಗೂ ಸುತ್ತ ಮುತ್ತಲ ಗ್ರಾಮಗಳ ಭಕ್ತರು ಆಗಮಿಸಿದ್ದು ಎಲ್ಲರಿಗೂ ದೇವರಿಗೆ ಅರ್ಪಿಸಿದ ಪಂಚಾಮೃತದಿಂದ ತಯಾರಿಸಿದ ನೈವೇಧ್ಯವನ್ನು ಪ್ರಸಾದವನ್ನಾಗಿ ಹಂಚಲಾಯಿತು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







