ಬೇಸಿಗೆಯ ಧಗೆ ಸುಡುತ್ತಿದೆ. ನೆಲವು ನೀರಿಗಾಗಿ ಪರಿತಪಿಸುತ್ತಿದೆ. ಆಳದಲ್ಲಿ ಬೇರೂರಿರುವ ಮರಗಳು ಮಳೆ ಬರುವವರೆಗೂ ತಡೆಯಬಲ್ಲವು. ಆದರೆ ಕಳೆದ ವರ್ಷ ನೆಟ್ಟ ಗಿಡಗಳು ಈ ಧಗೆಗೆ ಒಳಗಿಹೋಗುತ್ತವೆ.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಪಂಚಾಯತಿಯ ೧೧ನೆ ಮೈಲಿ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಆವರಣದಲ್ಲಿ ಕಳೆದ ವರ್ಷವಷ್ಟೆ ಯುವಶಕ್ತಿ ಸಂಘಟನೆಯ ಸದಸ್ಯರು ಗಿಡಗಳನ್ನು ನೆಟ್ಟಿದ್ದರು. ತಾವು ನೆಟ್ಟ ಗಿಡಗಳು ಬಿಸಿಲಿಗೆ ಬಾಡದಂತೆ ಅವರು ವಾರಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದಾರೆ.
ನಾವೆಲ್ಲರೂ ವ್ಯರ್ಥ ಮಾಡುವ ನೀರನ್ನು ಮನೆಯ ಹತ್ತಿರವಿರುವ ಗಿಡ ಮರಗಳಿಗೆ ಹಾಕುವದರೊಂದಿಗೆ ಈ ಬೇಸಿಗೆಯಲ್ಲಿ ನೀರಿಲ್ಲದೆ ಒಣಗುವ ಒಂದು ಗಿಡವನ್ನಾದರು ಬದುಕಿಸೋಣ ಎನ್ನುವ ಯುವಶಕ್ತಿ ಸಂಘಟನೆಯ ಅಧ್ಯಕ್ಷ ವಿಜಯಬಾವರೆಡ್ಡಿ, ನೀರು ಹಾಯಿಸಲು ಶ್ರಮಿಸಿದ ಕುದಪಕುಂಟೆ ವೆಂಕಟೇಶ್, ನಲ್ಲೋಜನಹಳ್ಳಿ ನಾಗರಾಜ್ ಮತ್ತು ಕಾಲೇಜಿನ ಸಿಬ್ಬಂದಿಗೆ ಧನ್ಯವಾದವನ್ನು ತಿಳಿಸುತ್ತಾರೆ.
- Advertisement -
- Advertisement -
- Advertisement -