ಬದ್ಧ ಎದುರಾಳಿಯಂತೆ ಇಲ್ಲಿಯವರೆಗೂ ಜೆಡಿಎಸ್ ಪಕ್ಷವನ್ನು ಚುನಾವಣೆಗಳಲ್ಲಿ ಎದುರಿಸಿಕೊಂಡು ಬರುತ್ತಿದ್ದ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಕಡೆಯ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದ್ದ ಬಿ.ಎನ್.ರವಿಕುಮಾರ್ ಅವರೇ ಜೆಡಿಎಸ್ ಅಭ್ಯರ್ಥಿಯೆಂದು ಘೋಷಣೆಯಾಗುತ್ತಿದ್ದಂತೆಯೇ ಪಕ್ಷ ಬೇಧ ಮರೆತು ಎಂ.ರಾಜಣ್ಣ ಅವರಿಗೆ ಸಲಹೆ ಸೂಚನೆ ನೀಡುತ್ತಿದ್ದ ನಡೆ ನೋಡುಗರಿಗೆ ಹಸ್ಯಾಸ್ಪದವಾಗಿ ಕಂಡು ಬಂದಿತ್ತು.
ಜೆಡಿಎಸ್ ಪಕ್ಷದಲ್ಲಿನ ಬೆಳವಣಿಗೆಗಳು ಮತ್ತು ಆಗುಹೋಗುಗಳ ಮೇಲೆ ಕಣ್ಣಿಟ್ಟಿದ್ದ ಕೆಲವು ಕಾಂಗ್ರೆಸ್ ಮುಖಂಡರು ನಾಮಪತ್ರ ಪರಿಶೀಲನೆಯ ಸಮಯದಲ್ಲಿ ತಾಲ್ಲೂಕು ಕಚೇರಿಯ ಬಳಿಯೇ ಬೀಡುಬಿಟ್ಟಿದ್ದರು. ಎಂ.ರಾಜಣ್ಣ ನಾಮಪತ್ರ ಪರಿಶೀಲನೆಯ ಕೊಠಡಿಯಿಂದ ಹೊರ ಬಂದರೂ ‘ನೀವು ಬಿಡಬೇಡಿ, ಕಾನೂನು ಹೋರಾಟ ಮಾಡಿ. ಚುನಾವಣಾಧಿಕಾರಿಗಳನ್ನು ಪ್ರಶ್ನಿಸಿ’ ಎಂದು ಪುನಃ ಕೊಠಡಿಯ ಒಳಕ್ಕೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಕಳುಹಿಸಿದರು.
- Advertisement -
- Advertisement -
- Advertisement -