ನೂತನ ವಧೂವರರಿಂದ ಗಿಡ ನೆಡಿಸಿ “ವನಸಿರಿ ನುಡಿಸಿರಿ” ಕಾರ್ಯಕ್ರಮ ಆಚರಣೆ

- Advertisement -
- Advertisement -

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಮಂಗಳವಾರ ನೂತನ ವಧೂವರರಿಂದ ಗಿಡ ನೆಡಿಸಿ “ವನಸಿರಿ ನುಡಿಸಿರಿ” ಕಾರ್ಯಕ್ರಮವನ್ನು ಆಚರಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಜೀವನದಲ್ಲಿ ಬರುವ ಪ್ರತಿಯೊಂದು ಶುಭ ಘಳಿಗೆಗೂ ಸಾಕ್ಷಿಯಾಗಿ ಒಂದೊಂದು ಗಿಡ ನೆಡುವ ಸಂಕಲ್ಪವನ್ನು ನಾವುಗಳು ಮಾಡಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ಮಕ್ಕಳ ಹುಟ್ಟಿದ ದಿನದಂದು ಕನಿಷ್ಟ ಒಂದಾದರೂ ಗಿಡ ನೆಡಿ. ವಿವಾಹದ ಸಂದರ್ಭ, ವಾರ್ಷಿಕೋತ್ಸವ, ಹಿರಿಯರ ಆರಾಧನೆ ಮುಂತಾದ ಕೌಟುಂಬಿಕ ಸಂದರ್ಭಗಳಿಗೆಲ್ಲ ಒಂದೊಂದು ಗಿಡ ನೆನಪಾಗಿ ಉಳಿಯುವಂತಾಗಲಿ. ಇದರಿಂದ ಇತರರಿಗೂ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಶಾಲೆಗಳಲ್ಲಿ ಸಹ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರಿನಲ್ಲಿ ಒಂದೊಂದು ಗಿಡ ನೆಟ್ಟು ಆ ವಿದ್ಯಾರ್ಥಿ ಅದನ್ನು ಪೋಷಿಸಲು ಪ್ರೇರೇಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧುಮಗ ಮೇಲೂರು ವಿ.ಶ್ರೀಕಾಂತ್, ಮಧುಮಗಳು ಅಪ್ಪೇಗೌಡನಹಳ್ಳಿ ಎಸ್.ಸಂಗೀತಾ ಅವರಿಗೆ ಕಸಾಪ ವತಿಯಿಂದ ಶುಭಹಾರೈಸಿ ಪುಸ್ತಕವನ್ನು ನೀಡಲಾಯಿತು.
ಗ್ರಾಮ ಪಂಚಾಯಿತಿ ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್, ಮೋಹನ್, ಮುನಿಯಪ್ಪ, ನಾರಾಯಣಸ್ವಾಮಿ, ದೇವರಾಜ್, ಮುನಿರಾಜು, ಮುನಿವೆಂಕಟಸ್ವಾಮಿ, ವೆಂಕಟೇಶ್, ತಿರುಮಳಪ್ಪ, ಕೃಷ್ಣಮೂರ್ತಿ, ನರಸಿಂಹಮೂರ್ತಿ, ಮುನಿರತ್ನಮ್ಮ, ವೆಂಕಟಮ್ಮ, ವರಲಕ್ಷ್ಮಿ, ದೇವಮ್ಮ, ಗಂಗಮ್ಮ, ವೆಂಕಟಲಕ್ಷ್ಮಮ್ಮ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!