ರೇಷ್ಮೆ ಗೂಡಿನ ಮಾರುಕಟ್ಟೆ ವಹಿವಾಟನ್ನು ನಿರ್ಬಂಧಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

- Advertisement -
- Advertisement -

“ಕೊರೋನಾ ಸೋಂಕಿನಿಂದ ನಮ್ಮ ದೇಶ ಮುಕ್ತವಾಗುವವರೆವಿಗೂ ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಮತ್ತು ನಮ್ಮ ಜಿಲ್ಲೆಯ ಎಲ್ಲಾ ರೇಷ್ಮೆ ಗೂಡಿನ ಮಾರುಕಟ್ಟೆಗಳ ವಹಿವಾಟು ನಿರ್ಭಂಧಿಸಬೇಕು. ನಮ್ಮ ದೇಶ ಮತ್ತು ರಾಜ್ಯ ಕೊರೋನಾ 3 ನೇ ಹಂತಕ್ಕೆ ತಲುಪಿದೆ. ಈ ಪ್ರಾಕೃತಿಕ ವಿಕೋಪದಿಂದ ರೇಷ್ಮೆ ಬೆಳೆಗಾರರೂ ಸಾವಿರಾರು ಕೋಟಿ ನಷ್ಟದಲ್ಲಿದ್ದೇವೆ. ನಾವೀಗ ಬೆಳೆದಿರುವ ಗೂಡುಗಳನ್ನು ಒಂದು ಕೆ.ಜಿಗೆ ಕೇವಲ 100 ರೂನಿಂದ 250 ರೂಗಳಿಗೆ ನೂಲು ಬಿಚ್ಚಾಣಿಕೆದಾರರಿಗೆ ರೈತರೇ ನೇರವಾಗಿ ಮನೆಗಳಲ್ಲಿ ಇಲಾಖಾ ಅಧಿಕಾರಿಗಳ ಸಲಹೆ -ಸಹಕಾರದಿಂದ ಮಾರಾಟ ಮಾಡುತ್ತಿದ್ದೇವೆ .ಇನ್ನು ಮುಂದೆ ಕೊರೋನಾ ಸೋಂಕು ನಿವಾರಣೆ ಆಗುವವರೆಗೂ ಹುಳ ಸಾಕಾಣಿಕೆ ನಿಲ್ಲಿಸಬೇಕಾಗಿ ಬರಬಹುದು.

ಮಳ್ಳೂರು ಶಿವಣ್ಣ

ಒಂದು ವೇಳೆ ರೇಷ್ಮೆ ಮಾರುಕಟ್ಟೆಯ ವಹಿವಾಟಿಗೆ ಅವಕಾಶ ಕೊಟ್ಟರೆ, ಪ್ರತಿ ನಿತ್ಯ ವಹಿವಾಟಿಗೆ ರೈತರು ಮತ್ತು ರೀಲರ್ ಗಳು 2500-3000 ಮಂದಿ ಮಾರುಕಟ್ಟೆಯ ವಹಿವಾಟಿನಲ್ಲಿ ಒಂದೇ ಕಡೆ ಸೇರಿದರೆ, ಯಾವುದೇ ಸಂಶಯವಿಲ್ಲದೆ 3 ನೇ ಹಂತದ ಸೋಂಕು ಉಂಟಾದರೆ ಸೋಂಕಿನ ಪ್ರಮಾಣ ಊಹೆಗೂ ನಿಲುಕುವುದಿಲ್ಲ. ಆದುದರಿಂದ ತಾವುಗಳು ದಯಮಾಡಿ ನಮ್ಮ ಜೀವ ಮತ್ತು ಜೀವನಗಳನ್ನ ಉಳಿಸುವ ಸಲುವಾಗಿ, ಶಿಡ್ಲಘಟ್ಟ ಮತ್ತು ನಮ್ಮ ಜಿಲ್ಲೆಯ ಎಲ್ಲಾ ರೇಷ್ಮೆ ಗೂಡಿನ ಮಾರುಕಟ್ಟೆ ಗಳಲ್ಲಿನ ವಹಿವಾಟನ್ನ ಅನಿರ್ದಿಷ್ಟ ಅವಧಿಯವರೆಗೆ ನಿರ್ಭಂದಿಸಿ ಆದೇಶ ಹೊರಡಿಸಲು ರಾಜ್ಯದ ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ತಮ್ಮನ್ನು ಪ್ರಾರ್ಥಿಸಿಕೊಳ್ಳುತ್ತೇನೆ” ಎಂದು ಕರ್ನಾಟಕ ರಾಜ್ಯ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ರಾಜ್ಯ ಸಂಚಾಲಕರ ಮಳ್ಳೂರು ಶಿವಣ್ಣ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದು ವಿನಂತಿಸಿಕೊಂಡಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!