19.6 C
Sidlaghatta
Monday, February 23, 2026

ಸೋಮವಾರದಿಂದ ಇ–ಹರಾಜು ಪ್ರಾರಂಭ

- Advertisement -
- Advertisement -

ಹೊಸ ಬದಲಾವಣೆಗಳು ಬರುವಾಗ ಅಡಚಣೆಗಳು ಸಹಜ. ಇ–ಹರಾಜಿನ ಪ್ರಕ್ರಿಯೆಯಲ್ಲೂ ಕೆಲವು ಅಡೆತಡೆಗಳು ಬರುತ್ತವೆ. ರೀಲರುಗಳು ಸಹಕರಿಸಬೇಕು ಎಂದು ರೇಷ್ಮೆ ಇಲಾಖೆಯ ಆಯುಕ್ತ ಸತೀಶ್ ಕೋರಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಭಾನುವಾರ ನಡೆದ ರೀಲರುಗಳ ಸಭೆಯಲ್ಲಿ ಅವರು ಮಾತನಾಡಿ. ಕಳೆದ ಕೆಲವು ದಿನಗಳಿಂದ ಇ–ಹರಾಜು ಪ್ರಾರಂಭಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಅದಕ್ಕೆ ತೊಡಕುಗಳು ತಾಂತ್ರಿಕ ಪರಿಣತರಿಂದ ಅರಿಪಡಿಸಿದ್ದೇವೆ. ಸ್ಯಾಮ್ಸಂಗ್ ಕಂಪೆನಿಯ ಕೆಲವು ಮೊಬೈಲ್ಗಳಿಗೆ ಮೊಬೈಲ್ಗಳಿಗೆ ಸ್ಟಾಟಿಕ್ ಐಪಿ ಅಳವಡಿಸುವ ಮೂಲಕ ಆ ತೊಂದರೆಯೂ ನಿವಾರಿಸಲಾಗಿದೆ. ತಾಂತ್ರಿಕ ಯುಗದಲ್ಲಿ ಎಲ್ಲೆಡೆಯೂ ಬದಲಾವಣೆ ಆಗುವಾಗ ರೇಷ್ಮೆ ಗೂಡಿನ ಮಾರುಕಟ್ಟೆಯೂ ಇದಕ್ಕೆ ಹೊರತಾಗಿಲ್ಲ. ಇ–ಹರಾಜಿನಿಂದ ಹಲವಾರು ಲಾಭಗಳಿವೆ. ಆದರೆ ರೀಲರುಗಳು ಬದಲಾವಣೆಗೆ ಒಗ್ಗಿಕೊಳ್ಳಬೇಕು. ತಿಳಿಯದ್ದನ್ನು ಅಧಿಕಾರಿಗಳಿಂದ ಕೇಳಿ ತಿಳಿದುಕೊಂಡು ಹೊಸ ಪದ್ಧತಿಗೆ ತಮ್ಮನ್ನು ಒಗ್ಗಿಸಿಕೊಳ್ಳಬೇಕು ಎಂದು ಹೇಳಿದರು.
ಸೋಮವಾರದಿಂದ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇ–ಹರಾಜು ಪ್ರಾರಂಭಿಸುತ್ತಿದ್ದೇವೆ. ರೀಲರುಗಳು ಅಧಿಕಾರಿಗಳೊಂದಿಗೆ ಸಹಕಾರ ನೀಡುವ ಮೂಲಕ ಇದು ಮುಂದುವರಿಯಲು ಕಾರಣರಾಗಬೇಕೆಂದು ಹೇಳಿದರು.
ರೇಷ್ಮೆ ಇಲಾಖೆಯ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಪ್ರಭಾಕರ್, ರೇಷ್ಮೆ ಉಪನಿರ್ದೇಶಕರಾದ ಮೊಯ್ನುದ್ದೀನ್, ಎಂ.ಎನ್.ರತ್ನಯ್ಯಶೆಟ್ಟಿ, ರೇಷ್ಮೆ ಕೋ ಆರ್ಡಿನೇಷನ್ ಸಮಿತಿ ಸದಸ್ಯ ಮಹಮ್ಮದ್ ಅನ್ವರ್, ರೀಲರುಗಳಾದ ಎ.ಆರ್. ಅಬ್ದುಲ್ ಅಜೀಜ್, ಡಿ.ಎಂ.ಜಗದೀಶ್ವರ್, ಜಿ.ರೆಹಮಾನ್, ಸಾಧಿಕ್ಪಾಷ, ಎ.ರಹಮತ್ತುಲ್ಲ, ರಿಜ್ವಾನ್, ಅಕ್ಮಲ್ ಪಾಷ, ವೈ.ರಾಮಕೃಷ್ಣಪ್ಪ, ಎಂ.ರಾಮಕೃಷ್ಣಪ್ಪ, ನಾಗನರಸಿಂಹ, ವಿಜಯಕುಮಾರ್, ಸನಾವುಲ್ಲ, ಡಿ.ಆರ್.ಯೂಸುಫ್, ರಿಯಾಜ್ಪಾಷ, ಇಮ್ತಿಯಾಜ್ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!