ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

- Advertisement -
- Advertisement -

ಹಂಡಿಗನಾಳ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ೨೦೧೮-೧೯ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಮಹಿಳೆಯರು ಒಗ್ಗೂಡಿದರೆ ಅಸಾಧ್ಯವನ್ನು ಸಾಧ್ಯವಾಗಿಸಬಹುದು ಎಂಬುದಕ್ಕೆ ಹಂಡಿಗನಾಳದ ಹಾಲು ಉತ್ಪಾದಕರ ಸಂಘ ಉದಾಹರಣೆಯಾಗಿದೆ. ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ ಈ ಸಂಘದ ಸಾಧನೆಗೆ ಕೆ.ಎಂ.ಎಫ್ ನಿಂದ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ಗೌರವಿಸಿರುವುದು ಅಭಿನಂದನಾರ್ಹ ಎಂದು ಅವರು ತಿಳಿಸಿದರು.
ಡಿಸಿಸಿ ಬ್ಯಾಂಕ್ ಮುಖಾಂತರ ಮಹಿಳೆಯರಿಗೆ ಬಡ್ಡಿರಹಿತ ಸಾಲವನ್ನು ಕೊಡಿಸಿಕೊಡುತ್ತೇನೆ. ಗುಣಮಟ್ಟದ ಹಾಲನ್ನು ಡೈರಿಗೆ ನೀವು ಸರಬರಾಜು ಮಾಡಿ. ಈಗಾಗಲೇ ಸಂಘದಿಂದ ಹೆಚ್ಚು ಹಣವನ್ನು ಉಳಿತಾಯ ಮಾಡಿ ಸುಮಾರು ೭೫ ಲಕ್ಷ ರೂ ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದು, ನನ್ನ ಅನುದಾನದಿಂದಲೂ ಈಗಾಗಲೇ ವಾಗ್ದಾನ ಮಾಡಿರುವಂತೆ ಹಣ ನೀಡುತ್ತೇನೆ. ರಾಜ್ಯಕ್ಕೇ ಮಾದರಿಯಾಗುವಂತೆ ಹಾಲಿನ ಡೈರಿಯನ್ನು ಅಭಿವೃದ್ಧಿಗೊಳಿಸಿ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್, ಹಿರಿಯ ಮುಖಂಡರಾದ ಎಂ.ನರಸಿಂಹಮೂರ್ತಿ, ನಾಗಪ್ಪನವರ ಶೀನಪ್ಪ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಜಾತಮ್ಮ ವಿ.ನಾಗರಾಜ್, ನಿರ್ದೇಶಕರಾದ ಬೈರಮ್ಮ, ಮುನಿರತ್ನಮ್ಮ, ಎಸ್.ಎಮ್.ಕಲ್ಪನ, ಅನಿತಾ, ಪಾರಿಜಾತ, ಮಂಜುಳಮ್ಮ, ಅನಿತಾ ಪ್ರಕಾಶ್, ಚಿಕ್ಕಮ್ಮ, ಜಯಮ್ಮ, ವೆಂಕಟಲಕ್ಷ್ಮಮ್ಮ, ಸಿಬ್ಬಂದಿ ರೂಪಮ್ಮ, ನಾಗವೇಣಿ, ಲಕ್ಷ್ಮಮ್ಮ, ಮುನಿನರಸಮ್ಮ, ಡೀಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಗುಲಾಬ್ ಜಾನ್, ವಿಸ್ತರಣಾಧಿಕಾರಿ ನರಸಿಂಹಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!