22.6 C
Sidlaghatta
Wednesday, July 2, 2025
Home Blog Page 993

ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವ್ಯ ಕಲರವ

0

ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕವಿ ಕಾವ್ಯದ ಸಂಗಮದಂತಿದ್ದ ಅಪರೂಪದ ಕಾವ್ಯ ಕಲರವ ನಡೆಯಿತು.
ಒಂದೆಡೆ ಹಿರಿಯ ಕವಿಗಳ ಪರಿಚಯ ಮಾಡಿಕೊಡುತ್ತಾ ಕವನಗಳನ್ನು ವಿದ್ಯಾರ್ಥಿಗಳು ಕಂಠಪಾಠ ಮಾಡಿಕೊಂಡು ಕವಿಗಳು ಓದುವಂತೆಯೇ ಕವನ ವಾಚಿಸಿದರೆ, ಮತ್ತೊಂದೆಡೆ ಶಾಲೆಯ ಪುಟ್ಟ ಕವಿಗಳು ಬರೆದಿರುವ ಕವನಗಳನ್ನು ಶಾಲೆಯ ಮುಖ್ಯ ಶಿಕ್ಷಕರು ವಾಚಿಸಿದರು.
ಕುವೆಂಪು ಅವರ ಗಗನಗುರು, ಬೇಂದ್ರೆಯವರ ಕವನ, ಡಾ.ಸಿದ್ದಲಿಂಗಯ್ಯ ಅವರ ನನ್ನ ಕವನ, ಬಿ.ಆರ್.ಲಕ್ಷ್ಮಣರಾವ್ ಅವರ ಮಾದರಿ, ಲಂಕೇಶ್ ಅವರ ಅವ್ವ, ಕೆ.ಎಸ್.ನರಸಿಂಹಸ್ವಾಮಿಯವರ ಇದುವೆ ನಮ್ಮ ಹಾಡು, ಕೆ.ಎಸ್.ನಿಸಾರ್ ಅಹಮದ್ ಅವರ ಹಾಡು ಕವಿಯೆ ಹಾಡು, ಪಂಜೆ ಮಂಗೇಶರಾಯರ ಹುತ್ತರಿ ಹಾಡು, ಪು.ತಿ.ನ ಅವರ ನನ್ನ ಹಾಡು, ಜಿ.ಎಸ್.ಶಿವರುದ್ರಪ್ಪನವರ ಕವಿತೆಯ ಕಷ್ಟ ಕವನಗಳನ್ನು ವಿದ್ಯಾರ್ಥಿಗಳಾದ ವರ್ಷ, ಅನುಷಾ, ಸ್ವಾತಿ, ಕಾವ್ಯ, ವಾಣಿಶ್ರೀ, ಚಂದ್ರಕಲಾ, ಶಿಲ್ಪ, ಅಮೃತಾ, ಅಂಜಲಿ, ಭವ್ಯ ವಾಚಿಸಿದರೆ, ವಿದ್ಯಾರ್ಥಿಗಳಾದ ರಾಜೇಶ, ನವೀನ, ಸಂತೋಷ, ಮೋಹನ್, ದಿಲೀಪ, ಅರವಿಂದ, ಶೇಖರ, ಮುರಳಿ, ಮುನಿಕೃಷ್ಣ ಕವಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮದ ನಿರೂಪಣೆ, ಸ್ವಾಗತ, ವಂದನಾರ್ಪಣೆ ಹಾಗೂ ಅಧ್ಯಕ್ಷತೆಯನ್ನು ಕೂಡ ವಿದ್ಯಾರ್ಥಿಗಳೇ ವಹಿಸಿಕೊಂಡು ಕಾವ್ಯ ಕಲರವ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು, ಅತಿಥಿಗಳಿಗೆ ಹಾಗೂ ಶಿಕ್ಷಕರಿಗೆ ತಾವೇ ತಯಾರಿಸಿದ ಹೂಗುಚ್ಛಗಳನ್ನು ನೀಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಐದನೇ ತರಗತಿಯ ವಿದ್ಯಾರ್ಥಿ ಡಿ.ಕೆ.ಕಿರಣ್ ಬರೆದ ಕವನ ’ನನ್ನ ಜೀವನದ ಕವನ’ ವನ್ನು ಶಾಲೆಯ ಮುಖ್ಯ ಶಿಕ್ಷಕ ಎಚ್.ಮುನಿಯಪ್ಪ ವಾಚಿಸಿದರು.
ಕವಿ ಪರಿಚಯ ಹಾಗೂ ಕವನವನ್ನು ವಾಚಿಸಿದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಸ್ನೇಹ ಯುವಕ ಸಂಘದ ಸದಸ್ಯರು, ಶಿಕ್ಷಕ ಬಸವರಾಜ್ ಮತ್ತು ಹರೀಶ್ ವಿತರಿಸಿದರು.
ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ, ಶಿಕ್ಷಕ ಬಸವರಾಜ್, ಕನ್ನಮಂಗಲದ ಸ್ನೇಹ ಯುವಕ ಸಂಘದ ಕಾರ್ಯದರ್ಶಿ ವಾಸುದೇವ್, ಶಿಕ್ಷಕರಾದ ಎಚ್.ಬಿ.ಮಂಜುನಾಥ್, ಕೆ.ಶಿವಶಂಕರ್, ಜೆ.ಶ್ರೀನಿವಾಸ, ಎಸ್.ಕಲಾಧರ್. ಟಿ.ಜೆ.ಸುನೀತಾ ಹಾಜರಿದ್ದರು.

ಅಪರಿಚಿತರು ತ್ಯಜಿಸಿ ಹೋಗಿದ್ದ ವೃದ್ಧೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಸಹಾಯದಿಂದ ಚಿಕಿತ್ಸೆ

0

ಪಟ್ಟಣದ ಬಸ್ ನಿಲ್ದಾಣದ ಬಳಿ ಶುಕ್ರವಾರ ಬೆಳಗಿನ ಜಾವ ಅಪರಿಚಿತರು ಸುಮಾರು 85 ಕ್ಕೂ ಹೆಚ್ಚು ವಯಸ್ಸಿನ ವೃದ್ಧೆಯನ್ನು ಬಿಟ್ಟು ಹೋಗಿರುವ ಮನ ಕಲಕುವ ಘಟನೆ ನಡೆದಿದೆ.
ಬಸ್ ನಿಲ್ದಾಣದ ಪುಸ್ತಕ ಅಂಗಡಿಯ ಮಾಲೀಕ ಮುನಿರಾಜು ಬೆಳಿಗ್ಗೆ ಅಂಗಡಿ ತೆಗೆಯಲು ಬಂದಾಗ ರಸ್ತೆಯಲ್ಲಿ ಸುಸ್ತಾಗಿ ಮಲಗಿದ್ದ ವೃದ್ಧೆಯನ್ನು ಗಮನಿಸಿ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸುವ ತಿಮ್ಮಕ್ಕನ ಸಹಾಯ ಪಡೆದು ನೆರಳಿನಲ್ಲಿ ತಂದು ಮಲಗಿಸಿದ್ದಾರೆ. ಹೋಟೆಲಿನಿಂದ ಇಡ್ಲಿ ತಂದು ತಿನಿಸಿದ್ದಾರೆ. ನಂತರ ಮಾತನಾಡಿಸಿ ವಿಚಾರಿಸಿದಾಗ ಅಜ್ಜಿ ಕೈ ಸನ್ನೆಯ ಮೂಲಕ ಮಾತುಬಾರದೆಂದು ತಿಳಿಸಿದಾಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಾಶ್ ಕುಮಾರ್ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣ ಮತ್ತು ವಯೋವೃದ್ಧರ ಇಲಾಖೆಯ ಅಧಿಕಾರಿ ಶಾಂತಾ ಅರಸ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ತಾಲ್ಲೂಕಿನ ಗೊರಮಡುಗು ಗ್ರಾಮದ ವೃದ್ಧಾಶ್ರಮದ ಓಬಣ್ಣ ಅವರ ವಶಕ್ಕೆ ಈ ವೃದ್ಧೆಯನ್ನು ಒಪ್ಪಿಸಿದರು.

ಸಿ.ಇ.ಟಿ ಶುಲ್ಕ ಏರಿಕೆ ಹಾಗೂ ಕಾಮೆಡ್ ಕೆ ಪರವಾಗಿ ಸರ್ಕಾರ ನೀತಿಗಳನ್ನು ವಿರೋಧಿಸಿ ಮನವಿ

0

ಶಿಡ್ಲಘಟ್ಟದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಸಿ.ಇ.ಟಿ ಶುಲ್ಕ ಏರಿಕೆ ಹಾಗೂ ಕಾಮೆಡ್ ಕೆ ಪರವಾಗಿ ಸರ್ಕಾರ ನೀತಿಗಳನ್ನು ರೂಪಿಸುತ್ತಿರುವುದನ್ನು ವಿರೋಧಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಆಶಾಕಿರಣ ಅಂಧ ಮಕ್ಕಳಿಗೆ ನ್ಯಾಯಾಲಯದ ಕಾರ್ಯಕಲಾಪಗಳ ಬಗ್ಗೆ ವಿವರಣೆ

0

ಶಿಡ್ಲಘಟ್ಟ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಾಕಿರಣ ಅಂಧ ಮಕ್ಕಳಿಗೆ ಹೆಚ್ಚುವರಿ ಸಿವಿಲ್ ನ್ಯಾಯಾಶರಾದ ವಿಜಯ ದೇವರಾಜ್ ಅರಸ್ರು ನ್ಯಾಯಾಲಯದ ಕಾರ್ಯಕಲಾಪಗಳ ಬಗ್ಗೆ ವಿವರಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್, ಆಶಾಕಿರಣ ಅಂಧಮಕ್ಕಳ ವಸತಿ ಶಾಲೆಯ ಕಾರ್ಯದರ್ಶಿ ನಾಗರಾಜ್, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಹಾಜರಿದ್ದರು.

ಮೂರನೇ ವರ್ಷದ ಕುಸ್ತಿ ಪಂದ್ಯಾವಳಿ

0

ಶಿಡ್ಲಘಟ್ಟದ ಅಮೀರ್ಬಾಬಾ ದರ್ಗಾ ಹತ್ತಿರ ಹೈದರಾಲಿ ಗರಡಿ ವತಿಯಿಂದ ಭಾನುವಾರ ನಡೆಸಿದ ಮೂರನೇ ವರ್ಷದ ಕುಸ್ತಿ ಪಂದ್ಯಾವಳಿಯು ರೋಚಕವಾಗಿದ್ದು ಜನರು ಉತ್ಸಾಹದಿಂದ ವೀಕ್ಷಿಸಿದರು.

ಶಿಡ್ಲಘಟ್ಟದಲ್ಲಿ ಚೊಚ್ಚಲ ಬ್ರಾಡ್ಗೇಜ್ಗೆ ರೈಲನ್ನು ಜನರು ಸ್ವಾಗತಿಸಿದರು

0

ಶಿಡ್ಲಘಟ್ಟದಲ್ಲಿ ನ್ಯಾರೋಗೇಜ್ ನಿಂದ ಬ್ರಾಡ್ಗೇಜ್ಗೆ ಪರಿವರ್ತನೆಯಾದ ಮೇಲೆ ಶುಕ್ರವಾರ ಚಿಕ್ಕಬಳ್ಳಾಪುರದಲ್ಲಿ ಉದ್ಘಾಟನೆಗೊಂಡು ಹೊಸ ದಾರಿಯಲ್ಲಿ ತನ್ನ ಚೊಚ್ಚಲ ಪ್ರಯಾಣವನ್ನು ಪ್ರಾರಂಭಿಸಿದ ರೈಲನ್ನು ಜನರು ಹರ್ಷೋದ್ಘಾರದಿಂದ ಸ್ವಾಗತಿಸಿದರು.

ದಲಿತರ ಹಕ್ಕೊತ್ತಾಯಗಳಿಗಾಗಿ ಒತ್ತಾಯಿಸಿ ಧರಣಿ

0

ಶಿಡ್ಲಘಟ್ಟದಲ್ಲಿ ಸೋಮವಾರ ದಲಿತರ ಹಕ್ಕೊತ್ತಾಯಗಳಿಗಾಗಿ ಒತ್ತಾಯಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯಿಂದ ಅನಿರ್ಧಿಷ್ಟಕಾಲ ಧರಣಿಯ ಭಾಗವಾಗಿ ತಮಟೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ನೀರಾವರಿ ಯೋಜನೆ ಜಾರಿಗಾಗಿ ಬೃಹತ್ ಮೆರವಣಿಗೆ

0

ಶಿಡ್ಲಘಟ್ಟದಲ್ಲಿ ಸೋಮವಾರ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಬೃಹತ್ ಮೆರವಣಿಗೆಯನ್ನು ಆಯೋಜಿಸಿತ್ತು. ಮೆರವಣಿಗೆಯಲ್ಲಿ ನೂರಾರು ಮಂದಿ ರೈತರು, ರೈತ ಮಹಿಳೆಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಕೀಲರು ಭಾಗವಹಿಸಿದ್ದರು.

ಶಿಕ್ಷಕ ಆರ್.ಮುನಿವೆಂಕಟಸ್ವಾಮಿ ಅವರಿಗೆ ರಾಜ್ಯಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ಗಂಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರೂಪುಗೊಳ್ಳಲು ಶ್ರಮಿಸಿರುವ ಶಿಕ್ಷಕ ಆರ್.ಮುನಿವೆಂಕಟಸ್ವಾಮಿ ಅವರಿಗೆ ಈ ಬಾರಿ ರಾಜ್ಯಪ್ರಶಸ್ತಿ ಲಭಿಸಿದೆ.

ಮೆಕ್ಸಿಕೊ, ಚಿಲಿ, ಸ್ಪೇನ್, ಜರ್ಮನಿ, ಚೀನಾ ಮತ್ತು ಅಮೆರಿಕಾ ದೇಶಗಳಿಂದ ವಿದೇಶಿ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮ

0

ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ರೈತ ಸುರೇಶ್ ಅವರ ಚಾಕಿ ಕೇಂದ್ರಕ್ಕೆ ಬುಧವಾರ ಮೆಕ್ಸಿಕೊ, ಚಿಲಿ, ಸ್ಪೇನ್, ಜರ್ಮನಿ, ಚೀನಾ ಮತ್ತು ಅಮೆರಿಕಾ ದೇಶಗಳಿಂದ ವಿದೇಶಿ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮದಲ್ಲಿ ಆಗಮಿಸಿರುವ 25 ವಿದ್ಯಾರ್ಥಿಗಳು ಅಧಿಕಾರಿ ಜನಾರ್ಧಮೂರ್ತಿ ಅವರಿಂದ ರೇಷ್ಮೆಯ ವಿವಿಧ ಹಂತಗಳ ಬಗ್ಗೆ ತಿಳಿದುಕೊಂಡರು.

error: Content is protected !!