23.1 C
Sidlaghatta
Wednesday, October 29, 2025

ಕರಾವಳಿಯ ರುಚಿಕರ ತಿನಿಸು – ಪತ್ರೊಡೆ

- Advertisement -
- Advertisement -

ಬೇಕಾಗುವ ಸಾಮಾಗ್ರಿ
10 ಕೆಸವಿನ ಸೊಪ್ಪು
1 ಟೀ ಕಪ್ಪು ಹೆಸರುಬೇಳೆ
1 ಟೀ ಕಪ್ಪು ಉದ್ದಿನಬೇಳೆ
1 ಟೀ ಕಪ್ಪು ಕಡಳೆಬೇಳೆ
1/2 ಟೀ ಕಪ್ಪು ಅಕ್ಕಿ
1 ಟೀ ಸ್ಪೂನ್ ಜೀರಿಗೆ, ಕೊತ್ತುಂಬರಿ
15 ಒಣಮೆಣಸು (ಖಾರ ಜಾಸ್ತಿ ಬೇಕಿದ್ದರೆ ಮೆಣಸು ಜಾಸ್ತಿ ಹಾಕಿಕೊಳ್ಳಿ)
ಒಂದು ಕಡಲೆಬೇಳೆ ಗಾತ್ರದಷ್ಟು ಇಂಗು
2 ನಿಂಬೆ ಗಾತ್ರದಷ್ಟು ಹುಣಸೆಹಣ್ಣು
ಉಪ್ಪು
ಒಂದು ನಿಂಬೆ ಗಾತ್ರದಷ್ಟು ಬೆಲ್ಲ
ಅರ್ಧ ತೆಂಗಿನ ಕಾಯಿ ತುರಿ
ಮಾಡುವ ವಿಧಾನ
ಮೊದಲು ಹುಣಿಸೆಹಣ್ಣನ್ನು ನೆನೆಸಿಟ್ಟಿಕೊಳ್ಳಿ. ಎಲ್ಲಾ ಬೇಳೆ ಮತ್ತು ಅಕ್ಕಿಯನ್ನು ಬೇರೆ ಬೇರೆಯಾಗಿ ಹುರಿಯಿರಿ. ಜೀರಿಗೆ ಕೊತ್ತುಂಬರಿ ಇಂಗು ಹುರಿಯಿರಿ. ಎಲ್ಲವನ್ನು ಒಣ ಪುಡಿಮಾಡಿಕೊಳ್ಳಿ. ಈ ಒಣಪುಡಿಗೆ ತೆಂಗಿನ ತುರಿ ನೆನೆಸಿಟ್ಟ ಹುಣಿಸೆರಸ, ಬೆಲ್ಲ, ಉಪ್ಪು, ಮೆಣಸಿನಕಾಯಿಯನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ಕೆಸವಿನ ಎಲೆಯನ್ನು ಸ್ವಚ್ಛಗೊಳಿಸಿ ಅದರ ದಂಟನ್ನು ತೆಗೆದು ಎಲೆಯ ಹಿಂಬಾಗಕ್ಕೆ ಬೀಸಿದ ಮಸಾಲೆಯನ್ನು ಹಚ್ಚಿ ಅದರ ಮೇಲೆ ಇನ್ನೊಂದು ಎಲೆ ಇಟ್ಟು ಅದಕ್ಕು ಮಸಾಲೆ ಹಚ್ಚಿ, ಅದರ ಮತ್ತೊಂದು ಎಲೆ ಇಟ್ಟು ಮಸಾಲೆ ಹಚ್ಚಿ ಅದನ್ನು ಸುರುಳಿ ಸುತ್ತಿ ಎತ್ತಿಡಿ. ಉಳಿದ ಎಲೆಗೂ ಹೀಗೆ ಮಸಾಲೆ ಹಚ್ಚಿ ಸುರುಳಿ ಸುತ್ತಿ ಅದನ್ನು ಉಗಿಯಲ್ಲಿ 1/2 ಗಂಟೆ ಬೇಯಿಸಿ. ಒಮ್ಮೆ ಮುಚ್ಚಳ ತೆಗೆದು ನೋಡಿ ಎಲೆ ಬಾಡದಿದ್ದಲ್ಲಿ ಇನ್ನು 10 ನಿಮಿಷ ಬೇಯಿಸಿ. ನಂತರ ಬೇಯಿಸಿದ ಸುರುಳಿಯನ್ನು 2 ಅಥವಾ 3 ಭಾಗವಾಗಿ ಮಾಡಿ ಅದರ ಮೇಲ್ಮೈಗೆ ಸಣ್ಣರವೆ ಹಚ್ಚಿ ಕಾವಲಿ ಮೇಲೆ ಎಣ್ಣೆ ಹಾಕಿ ಫ್ರೈ ಮಾಡಿ, ತಿನ್ನಲು ಬಡಿಸಿ.
ಅಥವಾ
ಸುರುಳಿ ಸುತ್ತಿ ಬೇಯಿಸಿದ ಎಲೆಯನ್ನು ಸಣ್ಣಕ್ಕೆ ಹೆಚ್ಚಿಟ್ಟುಕೊಳ್ಳಿ. 6 ಈರುಳ್ಳಿಯನ್ನು ಸಣ್ಣಕೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ 8 ಚಮಚ ಕೊಬ್ಬರಿ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ ಸಿಡಿಸಿ, 2 ಹೆಚ್ಚಿದ ಹಸಿಮೆಣಸು ಹಾಕಿ, ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಬಾಡಿಸಿ ಹೆಚ್ಚಿಟ್ಟ ಎಲೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದು ಪಲ್ಯದಂತೆ ಆಗುತ್ತದೆ. ಇದನ್ನು ಹಾಗೆಯೂ ತಿನ್ನಬಹುದು ಅಥವಾ ಅನ್ನಕ್ಕೂ ಕಲೆಸಿಕೊಳ್ಳಬಹುದು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!