ತಾಲ್ಲೂಕಿನ ಕನ್ನಮಂಗಲ ಅಂಗನವಾಡಿ ಕಾರ್ಯಕರ್ತೆ ಎನ್.ಪದ್ಮಾವತಿ ಅವರಿಗೆ ರಾಜ್ಯಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ಮತ್ತು ಪುರಸ್ಕಾರ ಸರ್ಕಾರದಿಂದ ಲಭಿಸಿದೆ.
ಅಂಗನವಾಡಿಯಲ್ಲಿ ಗೋಡೆಬರಹ, ಸುಭಾಷಿತ, ಚಾರ್ಟ್ ತಯಾರಿಸಿ ಕಲಿಕೆಗೆ ಬಳಸಿರುವುದಲ್ಲದೆ, ಮಕ್ಕಳಿಗಾಗಿ ಶಿಶುಶಿಕ್ಷಣ, ಶಿಶುಗೀತೆ ಮತ್ತು ಕಥೆ ಪುಸ್ತಕ ತಯಾರಿಸಿದ್ದಾರೆ. ಗ್ರಾಮಸ್ಥರಿಂದ, ದಾನಿಗಳಿಂದ ಮಕ್ಕಳಿಗೆ ಉಪಯುಕ್ತ ಆಟದ ಸಾಮಾನುಗಳನ್ನು ಪಡೆದು ಬಳಸುತ್ತಾ ಮಕ್ಕಳ ಕಲಿಕೆಯಲ್ಲಿ ಪ್ರಗತಿ ಸಾಧಿಸಿದ್ದಾರೆ. ಸುಮಾರು 24 ವರ್ಷಗಳಿಂದ ಕನ್ನಮಂಗಲ ಅಂಗನವಾಡಿ ಕಾರ್ಯಕರ್ತೆಯಾಗಿರುವ ಎನ್.ಪದ್ಮಾವತಿ ಅವರ ಕಾರ್ಯಪ್ರಗತಿಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ.
ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ನಡೆದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಎನ್.ಪದ್ಮಾವತಿ ಅವರಿಗೆ ಪ್ರಶಸ್ತಿ ಮತ್ತು 5,000 ರೂಗಳ ಚೆಕ್ ನೀಡಿ ಗೌರವಿಸಿದ್ದಾರೆ.