ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಮಂಗಳವಾರ ಅಭಿಮಾನಿಗಳು ಆಚರಿಸಿದ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಮಾತನಾಡಿದರು.
ಹಿಂದೆ ಹುಟ್ಟು ಹಬ್ಬಗಳನ್ನು ಆಚರಿಸುವ ಪದ್ಧತಿ ನಮ್ಮಲ್ಲಿ ಇರಲಿಲ್ಲ. ಕೆಲವು ವರ್ಷಗಳಿಂದ ಈಚೆಗೆ ಅಭಿಮಾನಿಗಳು ಹಾಗೂ ಸ್ನೇಹಿತರ ಒತ್ತಡಕ್ಕೆ ಮಣಿದು ಆಚರಣೆಯಲ್ಲಿ ಭಾಗಿಯಾಗುತ್ತಿದ್ದೇನೆ. ಆದರೂ ನೆಪದಲ್ಲಿ ಕೈಲಾದಷ್ಟು ಸಮಾಜ ಸೇವೆಯನ್ನು ಮಾಡುವ ಮೂಲಕ ಈ ಆಚರಣೆಯಲ್ಲಿ ಹಾಜರಿರುತ್ತೇನೆ. ಪರರ ಕಣ್ಣಿನಿಂದ ನೋಡುವ ಈ ಮಕ್ಕಳಿಗೆ ಸಾಧ್ಯವಾದಷ್ಟೂ ನೆರವಾಗಿವ ನಿಟ್ಟಿನಲ್ಲಿ ಅವರಿಗೆ ಅಗತ್ಯವಿರುವ ವಸ್ತುಗಳನ್ನು ನೀಡಿ ಅವರೊಂದಿಗೆ ಕೇಕ್ ಹಾಗೂ ತಿಂಡಿಯನ್ನು ತಿಂದು ಈ ದಿನ ಕಳೆಯುವುದು ಸಮಾಧಾನ ತಂದಿದೆ. ಎಲ್ಲರೂ ಕಣ್ಣು ದಾನ ಮಾಡುವ ಪ್ರಮಾಣ ಪತ್ರಕ್ಕೆ ಸಹಿ ಹಾಕಬೇಕು. ಮೃತ ವ್ಯಕ್ತಿಯ ಎರಡು ಕಣ್ಣುಗಳು ಇಬ್ಬರಿಗೆ ದೃಷ್ಟಿ ನೀಡಬಲ್ಲದು ಎಂದು ಅವರು ಹೇಳಿದರು.
ಪ್ರತಿಯೊಬ್ಬರ ಬೆಳವಣಿಗೆಗೂ ಹಲವಾರು ವ್ಯಕ್ತಿಗಳ ಕೊಡುಗೆ ಇರುತ್ತದೆ. ಸಮಾಜದ ಕೊಡುಗೆಯಿಂದ ಬೆಳೆದು ಬಂದ ನಾವು ಸಮಾಜಕ್ಕೆ ಋಣಿಯಾಗಿರಬೇಕು. ಸಾಧ್ಯವಾದಾಗಲೆಲ್ಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಂಧಮಕ್ಕಳೊಂದಿಗೆ ಕೇಕ್ ಕತ್ತರಿಸಿದ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು, ಮಕ್ಕಳಿಗೆ ನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ವಿತರಿಸಿದರು.
ಆನೂರು ದೇವರಾಜ್, ಕೋಟಹಳ್ಳಿ ಆಂಜಿನಪ್ಪ, ಅಶ್ವತ್ಥನಾರಾಯಣರೆಡ್ಡಿ, ನಟರಾಜ್, ಅಫ್ಸರ್ಪಾಷ, ವಿಶ್ವನಾಥ್, ವೆಂಕಟೇಶ್, ನರಸಿಂಹಪ್ಪ, ಕೃಷ್ಣಪ್ಪ, ಶ್ರೀನಿವಾಸ್ ಹಾಜರಿದ್ದರು.
- Advertisement -
- Advertisement -
- Advertisement -