24.1 C
Sidlaghatta
Monday, February 16, 2026

ಅಕ್ರಮ ಒತ್ತುವರಿ ತೆರವುಗೊಳಿಸಲು ಮನವಿ

- Advertisement -
- Advertisement -

ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮಕ್ಕೆ ಸೇರಿರುವ 86 ಎಕರೆಯಷ್ಟು ಜಮೀನನ್ನು ಬೇರೆ ತಾಲ್ಲೂಕಿನವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ತಕ್ಷಣ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಶಿಡ್ಲಘಟ್ಟದ ಗಡಿಭಾಗವನ್ನು ಗುರುತಿಸಿಕೊಡಬೇಕೆಂದು ರೈತ ಸಂಘದ ಸದಸ್ಯರು ತಹಶೀಲ್ದಾರರಿಗೆ ಸೋಮವಾರ ಮನವಿಯನ್ನು ಸಲ್ಲಿಸಿದರು.
ಶೆಟ್ಟಹಳ್ಳಿ ಗ್ರಾಮದ ಸರ್ವೆ ನಂ.78 ರ 86 ಎಕರೆ ಜಮೀನು ಶೆಟ್ಟಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿದೆ. ಈ ಗ್ರಾಮದ ಜನಸಂಖ್ಯೆ 3000 ಇದ್ದು, ತೀರಾ ಬಡ ಕುಟುಂಬದವರಿದ್ದಾರೆ. ಕೆಲವರಿಗಂತೂ ಕೃಷಿ ಜಮೀನೇ ಇಲ್ಲವಾಗಿದೆ. ಈ ಜಮೀನನ್ನು ಬೇರೆ ತಾಲ್ಲೂಕಿನವರು ಅಕ್ರಮವಾಗಿ ಪ್ರವೇಶಿಸಿ ಒತ್ತುವರಿ ಮಾಡಿಕೊಂಡಿದ್ದಾರೆ. ಆದ್ದರಿಂದ ಈ ಸರ್ಕಾರಿ ಗೋಮಾಳದ ಜಮೀನನ್ನು ಸರ್ವೆ ಮಾಡಿ ಗಡಿಭಾಗವನ್ನು ಗುರುತಿಸಿ, ಶೆಟ್ಟಹಳ್ಳಿ ಗ್ರಾಮದ ರೈತರಿಗೆ ಮೀಸಲಿಡಬೇಕು. ಶೆಟ್ಟಹಳ್ಳಿ ಗ್ರಾಮದ ರೈತ ಕುಟುಂಬಗಳಿಗೆ ಸಾಗುವಳಿ ಮಾಡಿಕೊಳ್ಳಲು ಕೊಡುವ ಮೂಲಕ ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ನಾಗರಾಜ, ಎಸ್.ಎನ್.ಮಾರಪ್ಪ, ನಾರಾಯಣಸ್ವಾಮಿ, ಮುನಿಯಪ್ಪ, ದ್ಯಾವಪ್ಪ, ಬಾಲಕೃಷ್ಣ, ಶಂಕರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!