19.9 C
Sidlaghatta
Sunday, July 20, 2025

ಇ–ಹರಾಜನ್ನು ನಿಲ್ಲಿಸಬೇಕೆಂದು ಪಟ್ಟುಹಿಡಿದ ರೀಲರುಗಳು

- Advertisement -
- Advertisement -

ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ರೀಲರುಗಳು ಮತ್ತು ರೈತರ ಸಭೆಯಲ್ಲಿ ೨೩ ರಿಂದ ಇ-ಹರಾಜು ಪ್ರಾರಂಭ ಮಾಡಲು ಒಪ್ಪಿಕೊಳ್ಳಲಾಗಿತ್ತು. ಆದರೆ ಶುಕ್ರವಾರ ಇ–ಹರಾಜಿನಲ್ಲಿ ರೀಲರುಗಳು ಪಾಲ್ಗೊಳ್ಳದೆ ಇ-ಹರಾಜು ಸ್ಥಗಿತಗೊಳಿಸುವಂತೆ ಪಟ್ಟು ಹಿಡಿದಿದ್ದರಿಂದ ಮಾರುಕಟ್ಟೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ರೀಲರುಗಳ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಯಾವೊಂದು ಸಮಸ್ಯೆಯನ್ನೂ ಬಗೆಹರಿಸದೆ ಇ–ಹರಾಜು ಮಾಡಲು ಬಿಡುವುದಿಲ್ಲ ಎಂದು ರೀಲರುಗಳು ಪಟ್ಟುಹಿಡಿದರು.
ನಗರದ ರೇಷ್ಮೆಗೂಡಿನ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಗೂಡು ಆವಕವಾಗಿತ್ತಾದರೂ ಹರಾಜಿನ ಸಮಯದಲ್ಲಿ ಇ-ಹರಾಜಿಗೆ ಸೈರನ್ ಹಾಕಲಾಯಿತು. ರೀಲರುಗಳು ಹರಾಜಿನಲ್ಲಿ ಭಾಗವಹಿಸಲಿಲ್ಲ, ಪುನಃ ಎರಡು ಬಾರಿ ಸೈರನ್ ಹಾಕಿದರೂ ಕೂಡಾ ಹರಾಜಿನಲ್ಲಿ ಭಾಗವಹಿಸದೆ ಇ–ಹರಾಜು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ನಂತರ ರೈತರು ತಂದಿರುವ ಗೂಡುಗಳನ್ನು ಬೇರೆ ಮಾರುಕಟ್ಟೆಗಳಿಗೆ ಸ್ಥಳಾಂತರ ಮಾಡಲು ಮುಂದಾದಾಗಲೂ ಗೂಡನ್ನು ಹೊರಗೆ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲವೆಂದು ರೀಲರುಗಳು ಪಟ್ಟು ಹಿಡಿದರು. ಬೇರೆ ಮಾರುಕಟ್ಟೆಗೆ ಹೋದರೂ ಅಲ್ಲಿಯೂ ಸಹ ಬಹಿರಂಗ ಹರಾಜೇ ನಡೆಯುತ್ತದೆ. ನಿಮಗೆ ವೃಥಾ ಸಾಗಾಣಿಕೆಯ ನಷ್ಟವಾಗುತ್ತದೆ. ಇಲ್ಲಿಯೇ ಬಹಿರಂಗ ಹರಾಜನ್ನು ನಡೆಸಿ ಎಂದು ಒತ್ತಾಯ ಮಾಡಿದರು. ಈ ವೇಳೆ ಕೆಲಕಾಲ ಮಾರುಕಟ್ಟೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನಂತರ ಮಧ್ಯ ಪ್ರವೇಶಿಸಿದ ಮಾರುಕಟ್ಟೆಯ ಅಧಿಕಾರಿಗಳು ರೀಲರುಗಳ ಮನವೊಲಿಸಲು ಮುಂದಾದರೂ ಕೂಡಾ ಸಾಧ್ಯವಾಗಲಿಲ್ಲ, ನಂತರ ಸ್ಥಳಕ್ಕೆ ಬೇಟಿ ನೀಡಿದ ತಹಶೀಲ್ದಾರ್ ಕೆ.ಎಂ.ಮನೋರಮಾ ರೀಲರುಗಳೊಂದಿಗೆ ಚರ್ಚೆ ನಡೆಸಿದರು. ಆಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ನಂತರ ಒಂದು ದಿನದ ಮಟ್ಟಿಗೆ ಇ–ಹರಾಜು ಪ್ರಕ್ರಿಯೆಯನ್ನು ಮುಂದೂಡಿ ಎಂದಿನಂತೆ ಬಹಿರಂಗ ಹರಾಜಿಗೆ ಅವಕಾಶ ಮಾಡಿಕೊಟ್ಟರು.
ಸಂಜೆ ೪ ಗಂಟೆಯ ನಂತರ ಹರಾಜು ಮಾಡಲಾಯಿತಾದರೂ ಬಂದಿದ್ದ 700 ಲಾಟ್ಗಳಲ್ಲಿ 426 ಲಾಟ್ ಮಾತ್ರ ಹರಾಜಿನಲ್ಲಿ ಮಾರಾಟ ಮಾಡಲಾಯಿತು. ಬಹಳಷ್ಟು ಮಂದಿ ರೈತರು ತಮ್ಮ ಗೂಡನ್ನು ಹರಾಜಿನಲ್ಲಿ ಸೇರಿಸದೆ ವಾಪಸ್ಸು ತೆಗೆದುಕೊಂಡು ಹೋದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!