22.1 C
Sidlaghatta
Sunday, October 26, 2025

ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವೀಕ್ಷಣೆ

- Advertisement -
- Advertisement -

ತಾಲೂಕಿನಾಧ್ಯಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ 13 ರಾಜೀವ್‍ಗಾಂಧಿ ಸೇವಾಕೇಂದ್ರಗಳು ಸೇರಿದಂತೆ ಅಂಗನವಾಡಿ ಕೇಂದ್ರ, ಸ್ಮಶಾನ ಅಭಿವೃದ್ದಿ, ಶುದ್ದ ಕುಡಿಯುವ ನೀರಿನ ಘಟಕಗಳು ಹಾಗು ಗ್ರಾಮೀಣ ಸಿಸಿ ರಸ್ತೆ ಕಾಮಗಾರಿಗಳು ನಿರ್ಮಸುವಲ್ಲಿ ಸಹಕಾರ ನೀಡಿರುವ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳ ಕ್ರಮ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವೀಕ್ಷಣೆಗಾಗಿ ತಾಲೂಕಿನ ಜೆ,ವೆಂಕಟಾಪುರ, ಹೊಸಪೇಟೆ, ಆನೂರು, ದಿಬ್ಬೂರಹಳ್ಳಿ ಹಾಗು ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ವೀಕ್ಷಣೆ ನಡೆಸಿ ಮಾತನಾಡಿದರು.
ಜಿಲ್ಲೆಯಾಧ್ಯಂತ 16 ರಾಜೀವ್ ಗಾಂಧಿ ಸೇವಾಕೇಂದ್ರಗಳು ನಿರ್ಮಿಸಿದ್ದು ಅದರಲ್ಲಿ 13 ಸೇವಾಕೇಂದ್ರಗಳು ಶಿಡ್ಲಘಟ್ಟ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಇನ್ನು ಅಂಗನವಾಡಿ ಕೇಂದ್ರಗಳು ಸೇರಿದಂತೆ ತಾಲೂಕಿನ ಆನೂರು ಗ್ರಾ.ಪಂ ವ್ಯಾಪ್ತಿಯ ಬೆಳ್ಳೂಟಿ ಗ್ರಾಮದಲ್ಲಿ ನೀರನ್ನು ರಾಜಕಾಲುವೆ ಮೂಲಕ ಹರಿಯುವಂತೆ ಮಾಡಿ ಕೆರೆ ಅಭಿವೃದ್ದಿಗಾಗಿ ಮಾಡಿರುವ ಕಾಮಗಾರಿ ಸೇರಿದಂತೆ ಹಿತ್ತಲಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕರ ಚಿರ ಶಾಂತಿಧಾಮ ಕಾಮಗಾರಿ ಹಾಗು ಸ್ಮಶಾನದ ಸುತ್ತ ಬೆಳೆಸಿರುವ ಸಸಿಗಳು ಸೇರಿದಂತೆ ಮಳೆ ನೀರು ಸಂಸ್ಕರಿಸಲು ತೊಟ್ಟಿ ನಿರ್ಮಿಸಿ ಸಹಕರಿಸಿದ ಸ್ಥಳೀಯರಿಗೆ ವೈಯಕ್ತಿಕ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ನಾಗೇಶ್, ಉಪಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ರೇಷ್ಮೆ ಉಪನಿರ್ದೇಶಕ ನಾಗಭೂಷಣ್, ಜಿ.ಪಂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮುನಿರಾಜು, ತಾ.ಪಂ ಇಓ ವೆಂಕಟೇಶ್, ನರೇಗ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!