ಶಿಡ್ಲಘಟ್ಟದ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ನಾಗರಾಜಶೆಟ್ಟಿ ಅವರ ರಂಗಭೂಮಿಯ ಸೇವೆಯನ್ನು ಗುರುತಿಸಿ ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎವರ್ಗ್ರೀನ್ ಇಂಟರ್ನ್ಯಾಷನಲ್ ಫೌಂಡೇಶನ್ ವಿಕಾರ್ಡ್ ಸಂಸ್ಥೆ ಮತ್ತು ರಾಜ್ಯ ಕಲ್ಚರಲ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು. ಉಪಮಹಾಪೌರ ಎಸ್.ಪಿ.ಹೇಮಲತಾ, ಶಾಸಕ ಗೋಪಾಲಯ್ಯ, ನಿವೃತ್ತ ಉಪ ಪೊಲೀಸ್ ಆಯುಕ್ತ ಎಂ.ಆರ್.ಮಹೇಶ್ವರನ್, ಸಚಿವ ಎಸ್.ಆರ್.ಪಾಟೀಲ್, ವಿಕಾರ್ಡ್ ಸಂಸ್ಥೆ ಅಧ್ಯಕ್ಷ ಏಕಾಂತ ಮುದಿಗೌಡರ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಾಜರಿದ್ದರು.