ತಾಲೂಕು ಆಡಳಿತ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಸಂಪ್ರದಾಯದಂತೆ ವೀಳ್ಯದ ಎಲೆ ನೀಡಿ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಸೋಮವಾರ ಅಧಿಕೃತ ಆಹ್ವಾನವನ್ನು ನೀಡಲಾಯಿತು.
ಫೆ ೧೭ ರ ಶನಿವಾರ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆಯುವ ೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಎಸ್.ವಿ.ನಾಗರಾಜರಾವ್ ಅವರ ನಗರದ ನಿವಾಸಕ್ಕೆ ತೆರಳಿ ದಂಪತಿಗಳಿಗೆ ವೀಳ್ಯದ ಎಲೆ ನೀಡಿ ಆಹ್ವಾನ ನೀಡಲಾಯಿತು.
ಶಾಸಕ ಎಂ.ರಾಜಣ್ಣ ಮಾತನಾಡಿ ೭ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನಿಮ್ಮನ್ನು ಸಭೆಯಲ್ಲಿ ಸರ್ವ ಸಮ್ಮತವಾಗಿ ಆಯ್ಕೆ ಮಾಡಲಾಗಿದ್ದು ಅದು ನಿಮ್ಮ ವಿದ್ವತ್ತಿಗೆ, ಕನ್ನಡ ನಾಡು ನುಡಿಗೆ ನೀವು ಸಲ್ಲಿಸಿದ ಸೇವೆಯನ್ನು ಗುರ್ತಿಸಿದಂತಾಗಿದೆ. ತಾವು ದಯಮಾಡಿ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿಕೊಂಡು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ನ ತಾಲೂಕು ಅಧ್ಯಕ್ಷ ಕೆ.ಮಂಜುನಾಥ್, ಕಸಾಪ ಕಾರ್ಯದರ್ಶಿ ಸುಂದರಾಚಾರಿ, ಖಜಾಂಚಿ ವೆಂಕಟೇಶಪ್ಪ, ಸಾವಿತ್ರಮ್ಮ, ಮಾಜಿ ತಾಲೂಕು ಅಧ್ಯಕ್ಷ ವಿ.ಕೃಷ್ಣ, ಶಿಕ್ಷಕರಾದ ದೇವರಾಜ್, ವೇಣುಗೋಪಾಲ್, ಮುಖಂಡರಾದ ಎ.ನಾಗರಾಜ್, ಶ್ರೀನಿವಾಸ್ (ಚಿನ್ನಿ) ಟಿ.ಟಿ.ನರಸಿಂಹಪ್ಪ, ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -