20.3 C
Sidlaghatta
Friday, August 1, 2025

ಕರವೇ ಸ್ವಾಭಿಮಾನಿ ಬಣದಿಂದ ರಕ್ತದಾನ ಶಿಬಿರ

- Advertisement -
- Advertisement -

ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಕರವೇ ಸ್ವಾಭಿಮಾನಿ ಬಣ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಕರವೇ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಅಗ್ರಹಾರ ಮೋಹನ್ ಮಾತನಾಡಿದರು.
ಕರವೇ ಸ್ವಾಭಿಮಾನಿ ಬಣದಿಂದ ಕಳೆದ ಹನ್ನೊಂದು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು, ರಕ್ತದಾನ ಶಿಬಿರವನ್ನೂ ಸಹ ಕಾಲಕಾಲಕ್ಕೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.
ಕರವೇ ಸ್ವಾಭಿಮಾನಿ ಬಣ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿನ ವಿವಿಧ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ರಕ್ತದ ಬೇಡಿಕೆಯಿದೆ. ನಮ್ಮಲ್ಲಿನ ದಾನಿಗಳು ರಕ್ತ ದಾನ ಮಾಡುವ ಮೂಲಕ ನಮ್ಮ ಭಾಗದ ರೋಗಿಗಳಿಗೆ ನೆರವಾಗಬೇಕಿದೆ. ಕರವೇ ಸ್ವಾಭಿಮಾನಿ ಬಣದಿಂದ ಕಾರ್ಮಿಕ, ರೈತ ಶೋಷಿತ, ಕನ್ನಡ ಪರ ಸಂಘಟನೆಯಾಗಿದೆ. ನೆಲ, ಜಲ, ಭಾಷೆಯ ಜೊತೆಗೆ ಸಾಮಾಜಿಕ ಕಾರ್ಯಗಳನ್ನೂ ಸಹ ಮಾಡುವ ಮೂಲಕ ಸಂಘಟನೆಯನ್ನು ಮುನ್ನಡೆಸುತ್ತಿರುವುದಾಗಿ ಹೇಳಿದರು.
ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಉಪಾಧ್ಯಕ್ಷ ಮುರಳಿ, ಕಾರ್ಯದರ್ಶಿ ಎಸ್.ಎಂ.ಮಂಜುನಾಥ್, ನಗರ ಘಟಕದ ಅಧ್ಯಕ್ಷ ಸತೀಶ್, ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ, ಉಪಾಧ್ಯಕ್ಷ ಧನಂಜಯ, ನವೀನ್, ಕೆ.ಎಂ.ನರಸಿಂಹಮೂರ್ತಿ, ಪೇಯಿಂಟ್ ಸಂಘದ ಅಧ್ಯಕ್ಷ ಸಲೀಂ ಪಾಷ, ಗೌರವಾಧ್ಯಕ್ಷ ಬಾಬು, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಡಾ.ಮಹಂತೇಶ್, ಸಿಬ್ಬಂದಿ ಕೃಷ್ಣವೇಣಿ, ಶ್ರೀನಾಥ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!