ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ನ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಕಸಾಪ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಡೆದ “ತತ್ವಾಮೃತ” ಕಾರ್ಯಕ್ರಮವನ್ನು ಉದ್ಘಾಟಿಸಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿದರು.
ದಾಸರ ಪದಗಳು, ಕೈವಾರ ತಾತಯ್ಯನವರ ತತ್ವಪದಗಳು, ಕೀರ್ತನೆಗಳನ್ನು ಹಾಡುವ ಗಾಯಕರನ್ನು ಗೌರವಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಗೌರವಿಸಿ ಜನರಿಗೆ ಹತ್ತಿರವಾಗಿಸುವ ಕೆಲಸವನ್ನು ಕಸಾಪ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ “ತತ್ವಾಮೃತ” ಕಾರ್ಯಕ್ರಮವನ್ನು ನಡೆಸುವ ಉದ್ದೇಶವಿದೆ. ಈ ಮೂಲಕ ಪ್ರತಿಯೊಂದು ಹಳ್ಳಿಯಲ್ಲೂ ಎಲೆ ಮರೆಯ ಕಾಯಿಯಂತೆ ಇರುವ ಗಾಯಕರಿಗೆ ಕಸಾಪ ಗೌರವ ಸಲ್ಲಿಸುತ್ತದೆ. ಆಧುನಿಕತೆಯು ನಮ್ಮನ್ನು ಆವರಿಸಿಕೊಳ್ಳುತ್ತಾ ದೇಸೀ ಸಾಹಿತ್ಯದ ಶಕ್ತಿ ಮತ್ತು ಬೇರುಗಳಾದ ತತ್ವಪದ, ದಾಸರ ಪದ ಮತ್ತು ಜನಪದ ಗೀತೆಗಾಯನಗಳು ಮರೆಯಾಗುತ್ತಿವೆ. ಅದನ್ನು ಹೆಚ್ಚು ಪ್ರಚುರಗೊಳಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮೊಟ್ಟಮೊದಲ ಕಾರ್ಯಕ್ರಮವನ್ನು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆಸಲಾಗುತ್ತಿದೆ. ತತ್ವ ಪದಗಳ ಗಾಯಕ ಗಮಕಗಳ ಕಿಮ್ಮತ್ತಿಗೆ ಎಲ್ಲರೂ ಕಿವಿಗೊಡುವಂತಾಗಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಪ್ರತಿಯೊಂದು ಹಳ್ಳಿಯಲ್ಲೂ ಯಾವುದೇ ಫಲಾಪೇಕ್ಷೆಯಿಲ್ಲದೆ ಕಲೆಯ ಆಸಕ್ತಿಯಿಂದ ತಮ್ಮ ಪಾಡಿಗೆ ತಾವು ಭಜನೆ, ತತ್ವಪದ ನಡೆಸಿಕೊಂಡು ಬರುವವರಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಕಲೆ ಹಾಗೂ ಜಾನಪದ ಸಾಹಿತ್ಯವನ್ನು ನಾವು ಕಸಾಪ ಮೂಲಕ ಗೌರವಿಸುತ್ತಿದ್ದೇವೆ. ಯುವ ಪೀಳಿಗೆ ಕೂಡ ಕಲೆಯತ್ತ ಆಕರ್ಷಿತರಾಗಲು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂಭತ್ತು ಮಂದಿ ಕಲಾವಿದರನ್ನು ಕಸಾಪ ವತಿಯಿಂದ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಚಿಂತಾಮಣಿ ತಾಲ್ಲೂಕು ಕಸಾಪ ಅಧ್ಯಕ್ಷ ಪಾಪಣ್ಣ, ಕೆ.ಪಿ.ಸಿ.ಸಿ ಸದಸ್ಯ ಶ್ರೀನಿವಾಸ್, ಶಂಕರ್, ವೀರಪ್ಪ, ವೆಂಕಟರಾಯಪ್ಪ, ಮುನಿಆಂಜಿನಪ್ಪ, ತಿಪ್ಪೇನಹಳ್ಳಿ ರಾಘವೇಂದ್ರ ಭಾಗವತರ್, ನಾಮದೇವ್, ಎ.ಎನ್.ಮುನಿನಾರಾಯಣಪ್ಪ, ರಾಜಗೋಪಾಲ್, ಅಪ್ಪಾಜಿಗೌಡ, ರೋಹಿಣಿ ಕುಮಾರ್, ಹನುಮಂತರಾಯಪ್ಪ, ರಾಮಚಂದ್ರಪ್ಪ, ಮಂಜುನಾಥ್, ನರಸಿಂಹಮೂರ್ತಿ, ಮರಿಯಣ್ಣ, ವೀರೇಗೌಡ, ರಮೇಶ್ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







