ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಲ್ಲಾ ೧೧ ನಿರ್ದೇಶಕರ ಸ್ಥಾನಗಳ ಪೈಕಿ ೧೧ ರಲ್ಲಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಠೇವಣಿದಾರರ ಕ್ಷೇತ್ರದಿಂದ ಈಗಾಗಲೇ ಅವಿರೋಧವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎ.ನಾಗರಾಜ್ ಆಯ್ಕೆಯಾಗಿದ್ದು ಇನ್ನುಳಿದಂತೆ ಸಾಲಗಾರರ ಕ್ಷೇತ್ರ ಸಾಮಾನ್ಯ ವರ್ಗದಿಂದ ಕಾಂತರಾಜು(೧೬೩), ಬಿ.ನಾರಾಯಣಸ್ವಾಮಿ (೧೬೭), ಎನ್.ಲಕ್ಷ್ಮಿನಾರಾಯಣಪ್ಪ (೧೩೭), ವೆಂಕಟೇಶಪ್ಪ (೧೫೯), ಪರಿಶಿಷ್ಠ ಜಾತಿ ಸ್ಥಾನದಿಂದ ಟಿ.ಎ.ನಾರಾಯಣಪ್ಪ(೧೭೮), ಪರಿಶಿಷ್ಠ ಪಂಗಡದ ಸ್ಥಾನದಿಂದ ಎನ್.ನರಸಿಂಹಯ್ಯ(೧೯೫), ಹಿಂದುಳಿದ ವರ್ಗದ ಸ್ಥಾನದಿಂದ ಕೆ.ಎನ್.ನರಸಿಂಹಮೂರ್ತಿ( ೧೮೨), ಜೆ.ಎನ್.ರಾಮಚಂದ್ರಪ್ಪ (೨೧೭), ಮಹಿಳಾ ಮೀಸಲು ಸ್ಥಾನದಿಂದ ನೀಲಮ್ಮ (೨೦೦) ಮತ್ತು ಎಂ.ಶೋಭಾರಾಣಿ (೨೦೯), ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ವೇಣುಗೋಪಾಲ್ (೧೭೨) ಮತಗಳು ಪಡೆಯುವ ಮೂಲಕ ಜಯಗಳಿಸಿರುವುದಾಗಿ ಚುನಾವಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
- Advertisement -
- Advertisement -
- Advertisement -
- Advertisement -