ತಾಲ್ಲೂಕಿನ ರೈತಕೂಟಗಳ ಒಕ್ಕೂಟದ ಸುಮಾರು 60 ಮಂದಿ ರೈತರು ಕೃಷಿ ಅಧ್ಯಯನ ಪ್ರವಾಸಕ್ಕಾಗಿ ಥಾಯ್ಲೆಂಡ್, ಸಿಂಗಾಪುರ ಮತ್ತು ಶ್ರೀಲಂಕಾ ದೇಶಗಳಿಗೆ ತೆರಳುತ್ತಿದ್ದಾರೆ.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ನಡೆದ ಪ್ರವಾಸದ ಪೂರ್ವಭಾವಿ ಸಭೆಯಲ್ಲಿ ಪ್ರವಾಸದಲ್ಲಿ ರೈತರು ತಿಳಿದುಕೊಳ್ಳಬಹುದಾದ ಕೃಷಿಗೆ ಸಂಬಂಧಿಸಿದ ವಿವಿಧ ಮಾಹಿತಿಗಳ ಕುರಿತಂತೆ ಪ್ರವಾಸಿ ಸಂಸ್ಥೆಯ ಅಧಿಕಾರಿ ಪ್ರಭಾಕರ್ ವಿವರಿಸಿದರು.
ಥಾಯ್ಲೆಂಡ್ ದೇಶದ ಬ್ಯಾಂಕಾಕ್ ಹೊರವಲಯದಲ್ಲಿರುವ ಕೃಷಿ ವಿಶ್ವವಿದ್ಯಾಲಯ ರೈತರ ಬೆಳೆಗಳನ್ನು ನೇರವಾಗಿ ಸಂತೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಅಲ್ಲಿನ ಪ್ರಗತಿ ಹೊಂದಿದ ಗ್ರಾಮಗಳಾದ ತಾರಾಬೂರಿ, ಕಾಂಚನಬೂರಿಗಳಲ್ಲಿ ರೇಷ್ಮೆ, ತರಕಾರಿ ಮತ್ತು ಸಾಕು ಪ್ರಾಣಿಗಳಾದ ಹಸು, ಕುರಿ, ಎಮ್ಮೆ, ಹಂದಿ ಸಾಕಾಣಿಕೆಯ ಆಧುನಿಕ ಪದ್ಧತಿಯ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಸಿಂಗಾಪೂರ ಮತ್ತು ಶ್ರೀಲಂಕಾ ದೇಶಗಳಲ್ಲೂ ರೈತರ ಉತ್ಪನ್ನಗಳ ಮಾರಾಟ ವ್ಯವಸ್ಥೆಯ ಬಗ್ಗೆ, ಗುಣಮಟ್ಟದ ಬಗ್ಗೆ ತಿಳುವಳಿಕೆಯನ್ನು ಹೊಂದುವುದರ ಬಗ್ಗೆ ವಿವರಿಸಲಾಯಿತು.
ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲಗೌಡ, ಸಿರಿ ಸಮೃದ್ಧಿ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಪ್ಪ, ಸ್ವಾಮಿ ವಿವೇಕಾನಂದ ರೈತ ಕೂಟದ ಬೂದಾಳ ರಾಮಾಂಜಿನಪ್ಪ, ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತಕೂಟದ ಮೇಲೂರು ನಾಗೇಂದ್ರಪ್ರಸಾದ್, ಬೋದಗೂರು ರಾಮಮೂರ್ತಿ, ಕೆಂಪರೆಡ್ಡಿ, ವೈ.ರಾಮಕೃಷ್ಣಪ್ಪ, ಪಿಳ್ಳವೆಂಕಟಸ್ವಾಮಪ್ಪ, ಮಳಮಾಚನಹಳ್ಳಿ ಜಗದೀಶ್, ತಾತಹಳ್ಳಿ ವೆಂಕಟೇಶಪ್ಪ, ನರಸಿಂಹಮೂರ್ತಿ, ಶ್ರೀರಾಮಪ್ಪ, ಮಾರೇಗೌಡ, ವೆಂಕಟೇಶಪ್ಪ, ಶ್ರೀನಿವಾಸ್, ವೀರಣ್ಣ, ವೆಂಕಟರೆಡ್ಡಿ, ಕುಚ್ಚಣ್ಣ ಅನಂತು, ದೇವರಾಜ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -