ಕ್ರಿಸ್ಮಸ್ ಹಬ್ಬದ ಆಚರಣೆ

- Advertisement -
- Advertisement -

ಯೇಸುವಿನ ಭೋದನೆಗಳು ಸಾರ್ವಕಾಲಿಕವಾಗಿದ್ದು, ಎಲ್ಲಾ ಕಾಲಘಟ್ಟಗಳಿಗೂ ಅನ್ವಯಿಸುವಂತಹ ಸತ್ಯ ಬೋದನೆಗಳನ್ನು ಅನುಸರಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಮ್ಮ ಹೇಳಿದರು.
ತಾಲ್ಲೂಕಿನ ಹುಜುಗೂರು ಗ್ರಾಮದಲ್ಲಿ ಇಮ್ಮಾನುವೆಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಧಾರ್ಮಿಕವಾದ ಕಾರ್ಯಕ್ರಮಗಳನ್ನು ಮಾಡುವುದರಿಂದ ಪ್ರತಿಯೊಂದು ಹಳ್ಳಿಗಳಲ್ಲಿಯೂ ಶಾಂತಿ, ಐಕ್ಯತೆ, ನೆಲೆಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಮುನುಷ್ಯನೂ ಕೂಡಾ ಯಾವುದೇ ಧರ್ಮದಲ್ಲಿದ್ದರೂ ಸಮಾಜದಲ್ಲಿನ ಬಡವರ್ಗದ ಜನತೆಯ ಹಿತವನ್ನು ಬಯಸಬೇಕು ಎಂದರು.
ಗ್ರಾಮದ ಮುಖಂಡ ರಾಮಚಂದ್ರಪ್ಪ ಮಾತನಾಡಿ, ಬಡವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವುದರೊಂದಿಗೆ ದೀನರನ್ನು ಪ್ರೀತಿಸುವಂತಹ ಕೆಲಸವಾಗಬೇಕು. ಎಲ್ಲಾ ವರ್ಗದ ಜನತೆಗೂ ಕೂಡಾ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿ ಕಾಣುವಂತೆ ಪ್ರೋತ್ಸಾಹ ಮಾಡಿದಾಗ ಮಾತ್ರ ಹಬ್ಬದ ಆಚರಣೆಗಳು ಅರ್ಥಪೂರ್ಣವಾಗುತ್ತವೆ ಎಂದರು.
ಇಮ್ಮಾನುವೆಲ್ ಚಾರಿಟೆಬಲ್ ಟ್ರಸ್ಟ್ನ ಮುನಿನಾರಾಯಣಪ್ಪ ಮಾತನಾಡಿ, ಯೇಸುಕ್ರಿಸ್ತನು ಮಾನವಕುಲಕ್ಕೆ ನೀಡಿದಂತಹ ಶಾಂತಿಯ ಸಂದೇಶಗಳನ್ನು ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಾಪರಹಿತವಾದ ಜೀವಿತವನ್ನು ಜೀವಿಸಿದಾಗ ಮಾನವನಿಗೆ ಮುಕ್ತಿದೊರೆಯುತ್ತದೆ. ಈ ನಿಟ್ಟಿನಲ್ಲಿ ಒತ್ತಡದ ಜೀವನದ ನಡುವೆಯೂ ಇಂತಹ ಧಾರ್ಮಿಕವಾದ ಕಾರ್ಯಗಳಿಂದ ರೋಗಮುಕ್ತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಯೇಸುವಿನ ಬಗ್ಗೆ ಭಕ್ತಿಗೀತೆಗಳನ್ನು ಆಯೋಜಿಸಲಾಗಿತ್ತು. ಟ್ರಸ್ಟಿನ ವತಿಯಿಂದ ಗ್ರಾಮದ ಬಡವರಿಗೆ ಬಟ್ಟೆಗಳನ್ನು ದಾನಮಾಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರತ್ನಮ್ಮ, ಅಂಬರೀಶ್, ಲಕ್ಷ್ಮಣ್, ಮುಖಂಡರಾದ ಕದಿರಪ್ಪ, ದೇವರಾಜ, ನಾರಾಯಣಸ್ವಾಮಿ, ಶಾಮಣ್ಣ, ಗ್ರಾ.ಪಂ.ಪಿಡಿಓ ಅಂಜನ್ಕುಮಾರ್, ಟ್ರಸ್ಟಿನ ಮಂಜುನಾಥ್, ಚೌಡಪ್ಪ, ಗಂಗನಹಳ್ಳಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!