ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಹಣ ವಸೂಲಿ; ಕ್ಷೇತ್ರ ಶಿಕ್ಷಣಧಿಕಾರಿಗೆ ಮನವಿ ಪತ್ರ ಸಲ್ಲಿಕೆ

- Advertisement -
- Advertisement -

ನಗರದ ಕೋಟೆ ವೃತ್ತದಲ್ಲಿರುವ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಅಲೆಮಾರಿ ಜನಾಂಗದ ಮುಖಂಡರುಗಳು ಪ್ರತಿಭಟನೆ ನಡೆಸಿ, ತಾಲ್ಲೂಕು ಅಲೆಮಾರಿ ಸಂಘದ ಪದಾಧಿಕಾರಿಗಳು ಅಲೆಮಾರಿ ಜನಾಂಗದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಅತಿ ಹೆಚ್ಚು ಶುಲ್ಕವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರವರ್ಗ-1 ರಲ್ಲಿರುವ 46 ಜಾತಿಗಳನ್ನು ಸರ್ಕಾರ 1966 ರಲ್ಲಿಯೇ ಅಲೆಮಾರಿ/ಅರೆಅಲೆಮಾರಿ ಜನಾಂಗವೆಂದು ಗುರ್ತಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಅಲೆಮಾರಿ/ಅರೆ ಅಲಮಾರಿ ಸಮುದಾಯದ ಮಕ್ಕಳಿಂದ ಯಾವುದೇ ಡೊನೇಷನ್ ಪಡೆಯದೆ ಉಚಿತ ಗುಣಮಟ್ಟದ ಶಿಕ್ಷಣವನ್ನು ನೀಡುವಂತೆ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದರೂ ಸಹ ಇಲಾಖೆಯ ಹಾಗು ಹಿರಿಯ ಅಧಿಕಾರಿಗಳ ಆಧೇಶಕ್ಕೆ ಯಾವುದೇ ಬೆಲೆ ನೀಡದೇ ನಗರದ ಡಾಲ್ಪಿನ್ ಶಾಲೆಯಲ್ಲಿ ಹೆಚ್ಚಿನ ಶುಲ್ಕ ಫಾವತಿಸಿಕೊಂಡಿದ್ದಾರೆ.
8 ನೇ ತರಗತಿ ವಿಧ್ಯಾರ್ಥಿನಿ ಯಶಸ್ವಿನಿ ಕೋಂ ನರಸಿಂಹಮೂರ್ತಿ, 6 ನೇ ತರಗತಿಯ ತೇಜಸ್ವಿನಿ ಕೋಂ ನರಸಿಂಹಮೂರ್ತಿ ಮತ್ತು 2 ನೇ ತರಗತಿಯ ಪ್ರಿಯದರ್ಶಿನಿ ಕೋಂ ನರಸಿಂಹಮೂರ್ತಿ ಅವರಿಂದ ಒಟ್ಟು 44 ಸಾವಿರ ರೂಪಾಯಿ ಹಣ ವಸೂಲಿ ಮಾಡಿರುತ್ತಾರೆ.
ಹಾಗಾಗಿ ಶಾಲಾ ಆಡಳಿತ ಮಂಡಳಿಯಿಂದ ಸದರಿ ವಿದ್ಯಾರ್ಥಿಗಳು ಕಟ್ಟಿರುವ ಹಣ ವಾಪಸ್ ಕೊಡಿಸುವುದು ಸೇರಿದಂತೆ ಸರ್ಕಾರದ ಆದೇಶದಂತೆ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಮಕ್ಕಳಿಗೆ ಉಚಿತ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿಕೊಡಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಅಲೆಮಾರಿ ಜನಾಂಗದ ಮುಖಂಡರಾದ ಆರ್. ಸುಭ್ರಮಣಿ, ನರಸಿಂಹಮೂರ್ತಿ, ನಾರಾಯಣಸ್ವಾಮಿ, ಶ್ರೀನಿವಾಸ್, ಮತ್ತಿತರರು ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!